ಮಾರುಕಟ್ಟೆ ಮಾತ್ರವಲ್ಲದೇ, ನಗರದ ಅಲ್ಲಲ್ಲಿ ಕಬ್ಬು ಹಾಗೂ ಬಾಳೆ ಕಂದುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆಯುಧಪೂಜೆ ದಿನದಂದು ಅಂಗಡಿಗಳು, ಕಚೇರಿಗಳು, ಮಳಿಗೆಗಳಲ್ಲಿ, ಕೈಗಾರಿಕಾ ಘಟಕಗಳಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ, ಕೆಲಸದ ಸ್ಥಳಗಳನ್ನು ಸ್ವಚ್ಛಗೊಳಿಸಿ ಪೂಜೆಗಾಗಿ ಅಣಿಗೊಳಿಸುವುದು ಸಾಮಾನ್ಯವಾಗಿತ್ತು.