<p><strong>ರಾಯಬಾಗ:</strong> ತಾಲ್ಲೂಕಿನ ಕಂಕಣವಾಡಿ ಬಸ್ ನಿಲ್ದಾಣದಿಂದ ಎಸ್ಸಿ ಕಾಲೊನಿ ವರೆಗೆ ₹30 ಲಕ್ಷ ಹಾಗೂ ನಿಪನಾಳ ಗ್ರಾಮದ ಎಸ್ಸಿ ಕಾಲೊನಿಯಿಂದ ನಿಪನಾಳಕರ ತೋಟದ ವರೆಗೆ ₹20 ಲಕ್ಷ ಅನುದಾನದಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಬುಧವಾರ ಚಾಲನೆ ನೀಡಿದರು.</p>.<p>ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಗಳು ಸುಧಾರಿಸುತ್ತಿರುವುದು ತೃಪ್ತಿ ನೀಡುತ್ತಿದೆ ಎಂದರು.</p>.<p>ರಸ್ತೆ ಕಾಮಗಾರಿಗಳಿಂದ ಜನರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಗ್ರಾಮಗಳ ನಡುವೆ ಸಂಪರ್ಕವೂ ಮತ್ತಷ್ಟು ಬಲವಾಗಲಿದೆ ಎಂದು ಹೇಳಿದರು.</p>.<p>ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪೂರೆ, ರಾಜಶೇಖರ ಖಾನದಾಳೆ,ಅಪ್ಪಾಸಾಬ ಬ್ಯಾಕುಡೆ, ಮಹಾಲಿಂಗ ಮುದ್ದಾಪುರೆ, ವೀರೇಂದ್ರ ಬ್ಯಾಕುಡೆ, ರಮೇಶ ಪೂಜಾರಿ, ಬಸವರಾಜ ಐನಾಪೂರೆ, ಹಾಲಪ್ಪ ಪಿರಗಿ, ನಾಗಪ್ಪ ಪಡತರಿ, ನವೀನ ವಾಘ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-21-2091601488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ:</strong> ತಾಲ್ಲೂಕಿನ ಕಂಕಣವಾಡಿ ಬಸ್ ನಿಲ್ದಾಣದಿಂದ ಎಸ್ಸಿ ಕಾಲೊನಿ ವರೆಗೆ ₹30 ಲಕ್ಷ ಹಾಗೂ ನಿಪನಾಳ ಗ್ರಾಮದ ಎಸ್ಸಿ ಕಾಲೊನಿಯಿಂದ ನಿಪನಾಳಕರ ತೋಟದ ವರೆಗೆ ₹20 ಲಕ್ಷ ಅನುದಾನದಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಬುಧವಾರ ಚಾಲನೆ ನೀಡಿದರು.</p>.<p>ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಗಳು ಸುಧಾರಿಸುತ್ತಿರುವುದು ತೃಪ್ತಿ ನೀಡುತ್ತಿದೆ ಎಂದರು.</p>.<p>ರಸ್ತೆ ಕಾಮಗಾರಿಗಳಿಂದ ಜನರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಗ್ರಾಮಗಳ ನಡುವೆ ಸಂಪರ್ಕವೂ ಮತ್ತಷ್ಟು ಬಲವಾಗಲಿದೆ ಎಂದು ಹೇಳಿದರು.</p>.<p>ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪೂರೆ, ರಾಜಶೇಖರ ಖಾನದಾಳೆ,ಅಪ್ಪಾಸಾಬ ಬ್ಯಾಕುಡೆ, ಮಹಾಲಿಂಗ ಮುದ್ದಾಪುರೆ, ವೀರೇಂದ್ರ ಬ್ಯಾಕುಡೆ, ರಮೇಶ ಪೂಜಾರಿ, ಬಸವರಾಜ ಐನಾಪೂರೆ, ಹಾಲಪ್ಪ ಪಿರಗಿ, ನಾಗಪ್ಪ ಪಡತರಿ, ನವೀನ ವಾಘ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-21-2091601488</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>