ಬೆಳಗಾವಿ: ತಾಲ್ಲೂಕಿನ ಪೀರನವಾಡಿಯಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಭಾವಿ ನೇತೃತ್ವದಲ್ಲಿ ಕೆಲವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ರಾಯಣ್ಣನ ಪ್ರತಿಮೆಗೆ ಶುಕ್ರವಾರ ಕ್ಷೀರಾಭಿಷೇಕ ಮಾಡಿ, ಪೂಜೆ ಸಲ್ಲಿಸಿ ಸಂಭ್ರಮ ಆಚರಿಸಿದರು.
ಈ ವೇಳೆ ಗಂಗಾಧರ ದೊಡಮನಿ, ಯುವರಾಜಕುಮಾರ ಅಷ್ಟೇಕರ, ಆನಂದ ಭೋಪಾಲಪುರ, ಪ್ರಭು ಕಾಕತಿಕರ ಇದ್ದರು.