ಎಸ್.ಆರ್. ದಳವಾಯಿ ಸಂಯುಕ್ತ ಪ್ರೌಢಶಾಲೆ, ಪಿಯು ಕಾಲೇಜು ಹಾಗೂ ಪದವಿ ಕಾಲೇಜಿನಲ್ಲಿ ಎನ್.ಬಿ. ಕುಸನಾಳೆ ಪೂಜೆ ಸಲ್ಲಿಸಿದರು. ವಿಜಯ ದಳವಾಯಿ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮು ಹಕ್ಕಿ ಪೂಜಿಸಿದರೆ, ಅಭಿಜಿತರಾವ ಶಿರಗೂರಕರ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ಪಿ.ಕೆ.ಪಿ.ಎಸ್.ನಲ್ಲಿ ಶರದ ಕೌಲಗುಡ್ಡ ಪೂಜೆ ನೆರವೇರಿಸಿದರು. ಬಾಳಾಸಾಹೇಬ ಚೌಗಲಾ ಧ್ವಜಾರೋಹಣ ಮಾಡಿದರು.