ಎರಡು ವರ್ಷಗಳ ಹಿಂದೆ ಹುತಾತ್ಮರಾದ ವಿಠ್ಠಲ ಮೇತ್ರಿಯ ಪತ್ನಿ ಸುಜಾತಾ ಮೇತ್ರಿ ಹಾಗೂ ನಿವೃತ್ತ ಸೈನಿಕರಾದ ವಿಠ್ಠಲ ಮೇತ್ರಿ, ಮಲ್ಲಪ್ಪ ಹೊಸತೋಟ, ಮಹಾದೇವ ಸವದಿ, ಘೂಳಪ್ಪ ಕಂಬಾರ, ಬಸವರಾಜ ಗಿರೆಣ್ಣವರ, ಮಲ್ಲಪ್ಪ ಜಿ. ಬಿ.ಪಾಟೀಲ, ಸಂಗಪ್ಪ ಕರಿಶೆಟ್ಟಿ, ಮಲ್ಲಪ್ಪ ಸಾಯನ್ನವರ, ಚನ್ನಬಸಪ್ಪ ಪೂಜೇರಿ ಅವರನ್ನು ಪ್ರಮುಖ ಶಿವನಗೌಡ ಪಾಟೀಲ, ಮಾಜಿ ಸೈನಿಕರ ವೇದಿಕೆ, ಗ್ರಾಮ ಯುವ ಸಂಘಟನೆಗಳು ಸನ್ಮಾನಿಸಿದರು. ಊರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.