ಇವರ ಮನೆ ಊರಿನಿಂದ ತುಸು ದೂರ ಇರುವ ಕಾರಣ, ದಂಪತಿ ಸಹಾಯಕ್ಕಾಗಿ ಎಷ್ಟು ಕೂಗಾಡಿದರೂ ಯಾರೂ ಬರಲಿಲ್ಲ. ಕೊನೆಗೆ ಮನೆಯಲ್ಲಿರುವುದನ್ನು ತೆಗೆದುಕೊಂಡು ಹೋಗಿ, ನಮ್ಮನ್ನು ಜೀವಂತ ಬಿಡಿ ಎಂದು ದಂಪತಿ ಅಂಗಲಾಚಿದರು. ಆಗ ಟ್ರಜರಿ ಕದ ತೆಗೆದು ಅಲ್ಲಿದ್ದ ಚಿನ್ನಾಭರಣ ಹಾಗೂ ಹಣ ಎತ್ತಿಕೊಂಡು ಪರಾರಿಯಾದರು ಎಂದು ದಂಪತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.