ಹಳ್ಳಿಗಳಿಗೆ ಬಸ್ ಬರುತ್ತಿಲ್ಲ: ಲಾಕ್ಡೌನ್ ತೆರವಾದ ನಂತರ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಆರಂಭಿಸಿವೆ. ಆದರೆ, ಗ್ರಾಮೀಣ ಭಾಗಕ್ಕೆ ಬಸ್ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ಆರಂಭಿಸದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಸದಸ್ಯರಾದ ಎಚ್.ಡಿ.ರಂಗನಾಥ್, ಅಂಜಲಿ ನಿಂಬಾಳ್ಕರ್, ಬಸನಗೌಡ ದದ್ದಲ್, ಟಿ.ಡಿ.ರಾಜೇಗೌಡ, ನಾರಾಯಣಸ್ವಾಮಿ ಸೇರಿ ಹಲವು ಸದಸ್ಯರು ಗಮನಸೆಳೆದರು.