ಅಥಣಿ: ‘ದೀಪದಿಂದ ದೀಪಗಳು ವೃದ್ಧಿಸುವಂತೆ ಆರ್ಎಸ್ಎಸ್ ಸಂಘಟನೆ ಬೆಳೆಯಲಿ’ ಎಂದು ಮುಖಂಡ ರಾಮಗೌಡ ಪಾಟೀಲ ಹಾರೈಸಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಭಾನುವಾರ ಆರ್ಎಸ್ಎಸ್ ಪಥಸಂಚಲನದ ಬಳಿಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘಟನೆಯ ಮುಖ್ಯ ವಕ್ತಾರ ಅಶೋಕ ಶಿಂತ್ರೆ ಮಾತನಾಡಿ, ‘ಮೊದಲು ಶಹರಗಳಲ್ಲಿ ನಮ್ಮ ಸಂಘಟನೆಯ ಪಥಸಂಚಲನಗಳು ನಡೆಯುತ್ತಿದ್ದವು. ಈಗ ಗ್ರಾಮೀಣ ಭಾಗದಲ್ಲೂ ಜರುಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು.