ಪಾವಗಡ: ತಾಲ್ಲೂಕಿನ ವೆಂಕಟಾಪುರ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ವಳ್ಳೂರು ಗ್ರಾಮದ ಮುತ್ಯಾಲಪ್ಪ(24), ಪಟ್ಟಣದ ಹನುಮಂತ(26), ಆಂಧ್ರದ ತೊಗರಿ ಕುಂಟೆಯ ನವೀನ್(22) ಮೃತರು. ತೀವ್ರವಾಗಿ ಗಾಯಗೊಂಡಿರುವ ನರಸಿಂಹ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಕಣಿವೇನಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಿದ್ದ, ಪಟ್ಟಣದಿಂದ ಕಣಿವೇನಹಳ್ಳಿ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಗಳ ನಡುವೆ ಅಪಘಾತ ನಡೆದಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.