‘ಎಲ್ಲರೂ ನೆರೆ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದುದು, ಲೆಕ್ಕಾಧಿಕಾರಿ ವರ್ಗಾವಣೆ, ಅನುದಾನದ ಕೊರತೆ ಹಾಗೂ ತಾಂತ್ರಿಕ ತೊಂದರೆಯಿಂದ ವೇತನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಮೇ ತಿಂಗಳ ವೇತನವನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತು ಜೂನ್ ಸಂಬಳವನ್ನು ವಾರದೊಳಗೆ ಕೊಡುತ್ತೇವೆ. ಸಹಕರಿಸಬೇಕು’ ಎಂದು ನಾಡಗೌಡ ಭರವಸೆ ನೀಡಿದರು. ನಂತರ ಪೌರಕಾರ್ಮಿಕರು ಪ್ರತಿಭಟನೆ ಹಿಂಪಡೆದರು.