<p><strong>ಸಂಕೇಶ್ವರ</strong>: ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯು 2026-27ನೇ ಸಾಲಿನ 67ನೇ ಕಬ್ಬು ಅರೆಯುವ ಹಂಗಾಮಿಗೆ ಸಜ್ಜಾಗುತ್ತಿದ್ದು, ಈ ಹಂಗಾಮಿನಲ್ಲಿ 10 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ತಿಳಿಸಿದರು.</p>.<p>ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಯಾಂತ್ರಿಕ ವಿಭಾಗದಲ್ಲಿ ಹಂಗಾಮು ಪೂರ್ವ ಸಿದ್ಧತೆ ಅಂಗವಾಗಿ ರೂಲರ್ ಪೂಜೆ ನೆರವೇರಿಸಿ ಮಾತನಾಡಿದರು.</p>.<p>ಕಳೆದ ಬಾರಿಗಿಂತ ಈ ವರ್ಷ ಹದಿನೈದು ದಿನಗಳ ಮುಂಚಿತವಾಗಿಯೇ ಅರೆಯುವ ಹಂಗಾಮು ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕಾಗಿ ಕಾರ್ಖಾನೆಯ ಬಾಯ್ಲರ್ಗಳು ಹಾಗೂ ಇತರೆ ತಾಂತ್ರಿಕ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಸಾಗುತ್ತಿವೆ ಎಂದರು.</p>.<p>ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ನೀಡಿದ್ದ ಪ್ರತಿ ಟನ್ಗೆ ₹50 ಪ್ರೋತ್ಸಾಹಧನವನ್ನು ಕಾರ್ಖಾನೆಯು ಮಹಾರಾಷ್ಟ್ರದ ರೈತರಿಗೂ ಪಾವತಿಸಲಾಗಿದೆ ಎಂದರು.</p>.<p>ಘೋಡಗೇರಿಯ ಗಜಲಿಂಗೇಶ್ವರ ದೇವಸ್ಥಾನ ಪೂಜಾರಿ ಶ್ರೀಕಾಂತ ಪೂಜೇರಿ, ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವಾನಾಯಿಕ ನಾಯಿಕ, ಶಿವಪುತ್ರಪ್ಪ ಶಿರಕೋಳಿ, ಪ್ರಭುದೇವ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ ಡಿ.ಎಸ್., ಕಾರ್ಯಾಲಯ ಅಧೀಕ್ಷಕ ಸುಭಾಷ್ ನಾಶಿಪುಡಿ, ಅಕೌಂಟೆಂಟ್ ಜನರಲ್ ಚಿದಾನಂದ ಮರೇದಿ ಹಾಜರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಕೇಶ್ವರ</strong>: ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯು 2026-27ನೇ ಸಾಲಿನ 67ನೇ ಕಬ್ಬು ಅರೆಯುವ ಹಂಗಾಮಿಗೆ ಸಜ್ಜಾಗುತ್ತಿದ್ದು, ಈ ಹಂಗಾಮಿನಲ್ಲಿ 10 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ತಿಳಿಸಿದರು.</p>.<p>ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಯಾಂತ್ರಿಕ ವಿಭಾಗದಲ್ಲಿ ಹಂಗಾಮು ಪೂರ್ವ ಸಿದ್ಧತೆ ಅಂಗವಾಗಿ ರೂಲರ್ ಪೂಜೆ ನೆರವೇರಿಸಿ ಮಾತನಾಡಿದರು.</p>.<p>ಕಳೆದ ಬಾರಿಗಿಂತ ಈ ವರ್ಷ ಹದಿನೈದು ದಿನಗಳ ಮುಂಚಿತವಾಗಿಯೇ ಅರೆಯುವ ಹಂಗಾಮು ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕಾಗಿ ಕಾರ್ಖಾನೆಯ ಬಾಯ್ಲರ್ಗಳು ಹಾಗೂ ಇತರೆ ತಾಂತ್ರಿಕ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಸಾಗುತ್ತಿವೆ ಎಂದರು.</p>.<p>ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ನೀಡಿದ್ದ ಪ್ರತಿ ಟನ್ಗೆ ₹50 ಪ್ರೋತ್ಸಾಹಧನವನ್ನು ಕಾರ್ಖಾನೆಯು ಮಹಾರಾಷ್ಟ್ರದ ರೈತರಿಗೂ ಪಾವತಿಸಲಾಗಿದೆ ಎಂದರು.</p>.<p>ಘೋಡಗೇರಿಯ ಗಜಲಿಂಗೇಶ್ವರ ದೇವಸ್ಥಾನ ಪೂಜಾರಿ ಶ್ರೀಕಾಂತ ಪೂಜೇರಿ, ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವಾನಾಯಿಕ ನಾಯಿಕ, ಶಿವಪುತ್ರಪ್ಪ ಶಿರಕೋಳಿ, ಪ್ರಭುದೇವ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ ಡಿ.ಎಸ್., ಕಾರ್ಯಾಲಯ ಅಧೀಕ್ಷಕ ಸುಭಾಷ್ ನಾಶಿಪುಡಿ, ಅಕೌಂಟೆಂಟ್ ಜನರಲ್ ಚಿದಾನಂದ ಮರೇದಿ ಹಾಜರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>