‘ಹರಿಯಾಣ, ಪಂಜಾಬ್, ಉತ್ತರ ಪ್ರದೇಶದ ರೈತರು ಸುದೀರ್ಘ ಹೋರಾಟ ಮಾಡಿದ್ದಾರೆ. ಹೀಗಾಗಿ ಇದು ರೈತರಿಗೆ ಸಿಕ್ಕ ಜಯವಾಗಿದೆ. ಇದರಿಂದ ಬಿಜೆಪಿಯನ್ನು ಅಭಿನಂದಿಸಬೇಕಿಲ್ಲ. ಒತ್ತಡಕ್ಕೆ ತಲೆ ಬಾಗಿದ್ದಾರೆ. ರೈತರ ನಿರಂತರ ಪ್ರತಿಭಟನೆಗೆ ಮೋದಿಯವರು ತಲೆ ಬಾಗಿಸಿ ಗೌರವ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವೂ ರೈತರ ಬೆಂಬಲಕ್ಕೆ ನಿಂತು ಹೋರಾಡಿದೆ. ಸಾರ್ವಜನಿಕರು, ಬುದ್ಧಿಜೀವಿಗಳು ಮತ್ತು ಇತರ ಪಕ್ಷದವರು ಕೂಡ ರೈತರನ್ನು ಬೆಂಬಲಿಸಿದ್ದಾರೆ. ಇವರೆಲ್ಲರಿಗೂ ಗೆಲುವು ಸಿಕ್ಕಿದೆ’ ಎಂದು ತಿಳಿಸಿದರು.