<p><strong>ಸವದತ್ತಿ</strong>: 44 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರೆ ಹಿನ್ನೆಲೆಯಲ್ಲಿ ಸವದತ್ತಿ ನಗರದಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಬಿಟ್ಟುಬಿಡದೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಆ ಸಂಭ್ರಮ ಕಸಿಯುತ್ತಿದೆ!</p>.<p>ಗ್ರಾಮದೇವಿಯರ ಜಾತ್ರೆ ನಡೆಯುವ ಸ್ಥಳದಲ್ಲೇ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಜಾತ್ರೆಗಾಗಿ ತಮ್ಮ ಮನೆಗೆ ಬಂದಿರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರಲ್ಲೇ ಜನ ಹೈರಾಣಾಗುತ್ತಿದ್ದಾರೆ.</p>.<p>24x7 ಕುಡಿಯುವ ನೀರು ಪೂರೈಕೆ ಕಾಮಗಾರಿ ಅನುಷ್ಠಾನಗೊಂಡರೂ, ನಿರಂತರವಾಗಿ ನೀರು ಪೂರೈಕೆ ಆಗುತ್ತಿಲ್ಲ. ಯೋಜನೆಗಾಗಿ ವ್ಯಯಿಸಿದ ₹100 ಕೋಟಿ ಅನುದಾನ ವ್ಯರ್ಥವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.</p>.<p>ಕಟ್ಟಿ ಓಣಿಯಲ್ಲಿ ಜಾತ್ರೆಗೂ ಮುಂಚಿತವಾಗಿ ಈ ಸಮಸ್ಯೆ ತಲೆದೋರಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ್ದರು.</p>.<p>ಈಗ ಪದಕಿ ಗಲ್ಲಿ, ಗುರು ನಗರ, ಹಗ್ಗದೇವರ ಓಣಿ, ಪಟ್ಟದಕಲ್ಲು ಓಣಿ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ಜಾತ್ರೆ ಮಾಡುವುದನ್ನು ಬಿಟ್ಟು ನೀರಿಗಾಗಿ ಕಾಯುವಂತಾಗಿದೆ. ಆಶೀರ್ವಾದ ನಗರ ಸೇರಿ ಕೆಲವೆಡೆ ನೀರಿನ ಮೀಟರ್ ಸಂಪರ್ಕವನ್ನೂ ಕಲ್ಪಿಸಿಲ್ಲ.</p>.<p>‘44 ವರ್ಷಗಳ ನಂತರ ಅದ್ದೂರಿಯಾಗಿ ನಡೆಯುತ್ತಿರುವ ಜಾತ್ರೆಗೆ ಸಂಬಂಧಿಕರು ಆಗಮಿಸಿದ್ದಾರೆ. ಆದರೆ, ಮಲಪ್ರಭಾ ನದಿ ತಟದಲ್ಲಿದ್ದರೂ ನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ. ಮನೆಯಲ್ಲಿ ಬಾಣಂತಿಯರಿದ್ದು, ಮಕ್ಕಳ ಸ್ನಾನಕ್ಕೂ ನೀರು ಇಲ್ಲದಂತಾಗಿದೆ’ ಎಂದು ಗುರು ನಗರದ ನಿವಾಸಿ ಎಸ್.ಎಲ್.ಸುಗಾವಿ ಬೇಸರಿಸಿದರು.</p>.<p>‘24x7 ಕುಡಿಯುವ ನೀರು ಪೂರೈಕೆ ಯೋಜನೆ ಹೆಸರಿಗಷ್ಟೇ ಇದೆ ಎಂಬಂತಾಗಿದೆ. ನೀರಿನ ಸಮಸ್ಯೆ ನಮ್ಮನ್ನು ಹೈರಾಣಾಗಿಸಿದೆ. ಇದನ್ನು ಹೇಳಲು ಕರೆ ಮಾಡಿದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಶಂಕರ ಇಜಂತಕರ ಮತ್ತು ಆನಂದ ತಿಗಡಿ.</p>.<p>‘ಇನಾಮತಿ ಪ್ಲಾಟ್ನಲ್ಲಿ ಮೂರು ದಿನಗಳಾದರೂ ಕುಡಿಯುವ ನೀರು ಬಂದಿಲ್ಲ. ನಗರಸಭೆ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ತ್ವರಿತ ಕ್ರಮ ವಹಿಸಬೇಕು’ ಎಂದು ವಾಸು ಕಣವಿ ಒತ್ತಾಯಿಸುತ್ತಾರೆ.</p>.<p>‘₹100 ಕೋಟಿ ಅನುದಾನದಲ್ಲಿ ಕೈಗೊಂಡ ಯೋಜನೆ ಹಳ್ಳ ಹಿಡಿದಿದೆ. ಅದರಿಂದ ನಿಗದಿತ ಸಮಯದಲ್ಲಿ ನೀರು ಪೂರೈಸಲು ಆಗುತ್ತಿಲ್ಲ’ ಎಂದು ರಿಯಾಜ್ಅಹ್ಮದ್ ನಿಪ್ಪಾಣಿ ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-21-283993720</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ</strong>: 44 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರೆ ಹಿನ್ನೆಲೆಯಲ್ಲಿ ಸವದತ್ತಿ ನಗರದಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಬಿಟ್ಟುಬಿಡದೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಆ ಸಂಭ್ರಮ ಕಸಿಯುತ್ತಿದೆ!</p>.<p>ಗ್ರಾಮದೇವಿಯರ ಜಾತ್ರೆ ನಡೆಯುವ ಸ್ಥಳದಲ್ಲೇ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಜಾತ್ರೆಗಾಗಿ ತಮ್ಮ ಮನೆಗೆ ಬಂದಿರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರಲ್ಲೇ ಜನ ಹೈರಾಣಾಗುತ್ತಿದ್ದಾರೆ.</p>.<p>24x7 ಕುಡಿಯುವ ನೀರು ಪೂರೈಕೆ ಕಾಮಗಾರಿ ಅನುಷ್ಠಾನಗೊಂಡರೂ, ನಿರಂತರವಾಗಿ ನೀರು ಪೂರೈಕೆ ಆಗುತ್ತಿಲ್ಲ. ಯೋಜನೆಗಾಗಿ ವ್ಯಯಿಸಿದ ₹100 ಕೋಟಿ ಅನುದಾನ ವ್ಯರ್ಥವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.</p>.<p>ಕಟ್ಟಿ ಓಣಿಯಲ್ಲಿ ಜಾತ್ರೆಗೂ ಮುಂಚಿತವಾಗಿ ಈ ಸಮಸ್ಯೆ ತಲೆದೋರಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ್ದರು.</p>.<p>ಈಗ ಪದಕಿ ಗಲ್ಲಿ, ಗುರು ನಗರ, ಹಗ್ಗದೇವರ ಓಣಿ, ಪಟ್ಟದಕಲ್ಲು ಓಣಿ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ಜಾತ್ರೆ ಮಾಡುವುದನ್ನು ಬಿಟ್ಟು ನೀರಿಗಾಗಿ ಕಾಯುವಂತಾಗಿದೆ. ಆಶೀರ್ವಾದ ನಗರ ಸೇರಿ ಕೆಲವೆಡೆ ನೀರಿನ ಮೀಟರ್ ಸಂಪರ್ಕವನ್ನೂ ಕಲ್ಪಿಸಿಲ್ಲ.</p>.<p>‘44 ವರ್ಷಗಳ ನಂತರ ಅದ್ದೂರಿಯಾಗಿ ನಡೆಯುತ್ತಿರುವ ಜಾತ್ರೆಗೆ ಸಂಬಂಧಿಕರು ಆಗಮಿಸಿದ್ದಾರೆ. ಆದರೆ, ಮಲಪ್ರಭಾ ನದಿ ತಟದಲ್ಲಿದ್ದರೂ ನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ. ಮನೆಯಲ್ಲಿ ಬಾಣಂತಿಯರಿದ್ದು, ಮಕ್ಕಳ ಸ್ನಾನಕ್ಕೂ ನೀರು ಇಲ್ಲದಂತಾಗಿದೆ’ ಎಂದು ಗುರು ನಗರದ ನಿವಾಸಿ ಎಸ್.ಎಲ್.ಸುಗಾವಿ ಬೇಸರಿಸಿದರು.</p>.<p>‘24x7 ಕುಡಿಯುವ ನೀರು ಪೂರೈಕೆ ಯೋಜನೆ ಹೆಸರಿಗಷ್ಟೇ ಇದೆ ಎಂಬಂತಾಗಿದೆ. ನೀರಿನ ಸಮಸ್ಯೆ ನಮ್ಮನ್ನು ಹೈರಾಣಾಗಿಸಿದೆ. ಇದನ್ನು ಹೇಳಲು ಕರೆ ಮಾಡಿದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಶಂಕರ ಇಜಂತಕರ ಮತ್ತು ಆನಂದ ತಿಗಡಿ.</p>.<p>‘ಇನಾಮತಿ ಪ್ಲಾಟ್ನಲ್ಲಿ ಮೂರು ದಿನಗಳಾದರೂ ಕುಡಿಯುವ ನೀರು ಬಂದಿಲ್ಲ. ನಗರಸಭೆ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ತ್ವರಿತ ಕ್ರಮ ವಹಿಸಬೇಕು’ ಎಂದು ವಾಸು ಕಣವಿ ಒತ್ತಾಯಿಸುತ್ತಾರೆ.</p>.<p>‘₹100 ಕೋಟಿ ಅನುದಾನದಲ್ಲಿ ಕೈಗೊಂಡ ಯೋಜನೆ ಹಳ್ಳ ಹಿಡಿದಿದೆ. ಅದರಿಂದ ನಿಗದಿತ ಸಮಯದಲ್ಲಿ ನೀರು ಪೂರೈಸಲು ಆಗುತ್ತಿಲ್ಲ’ ಎಂದು ರಿಯಾಜ್ಅಹ್ಮದ್ ನಿಪ್ಪಾಣಿ ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-21-283993720</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>