ಈ ಶಾಲೆಗೆ ಕೆಂಪುಹೆಂಚಿನ ಚಾವಣಿ ಇದೆ. ನಿರಂತರ ಮಳೆಯ ಕಾರಣ ರಾತ್ರಿ ಕುಸಿದುಬಿದ್ದಿದೆ. ಶಾಲೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸೋಮವಾರ ಎಂದಿನಂತೆ ಶಾಲೆಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಮಕ್ಕಳು ಶಾಲೆಯಲ್ಲಿ ಇದ್ದಾಗ ಚಾವಣಿ ಕುಸಿದಿದ್ದರೆ ಅಪಾಯ ಸಂಭವಿಸುತ್ತಿತ್ತು ಎಂದು ಮಲ್ಲಪ್ಪ ಟೋಣಪೆ, ಉಮೇಶ ಪಾಟೀಲ, ರಾಜು ಚೌಹಾಣ ಆತಂಕ ವ್ಯಕ್ತಪಡಿಸಿದ್ದಾರೆ.