ಅಥಣಿ: ತಾಲ್ಲೂಕಿನ ಕೊಕಟನೂರ ಸಸ್ಯಪಾಲನಾಲಯದಲ್ಲಿ ಅರಣ್ಯ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬಿಇಒ ಕಚೇರಿ ಸಹಯೋಗದಲ್ಲಿ ಬೀಜದುಂಡೆ ತಯಾರಿಕೆ ಕುರಿತು ಮಕ್ಕಳಿಗೆ ತರಬೇತಿ ನೀಡಲಾಯಿತು.
ಪಟ್ಟಣದ ಕೆಎಲ್ಇ ರಣಮೋಡೆ ಇಂಗ್ಲಿಷ್ ಮಾಧ್ಯಮ ಶಾಲೆ, ಕೆಎಚ್ಪಿಎಸ್ ನಂ.3, ಕೆಎಚ್ಪಿಎಸ್ ಸುಟ್ಟಟ್ಟಿ, ಸರ್ಕಾರಿ ಪ್ರೌಢಶಾಲೆ ಬಳವಡ, ಎಸ್ಎಎಸ್ ಪ್ರೌಢಶಾಲೆ ಐಗಳಿ, ಕೆಎಚ್ಪಿಎಸ್ ಕಟಗೇರಿಯ 250 ಮಕ್ಕಳು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಹೊನಗೌಡರ ಚಾಲನೆ ನೀಡಿದರು. ಆರ್ಎಫ್ಒ ಪ್ರಶಾಂತ ಗೌರಾಣಿ, ಸಿಬ್ಬಂದಿ ರಾಜೇಶ ಪಾಟೀಲ, ದಯಾನಂದ ತರಬೇತಿ ನೀಡಿದರು. ‘ಮಗುವಿಗೊಂದು ಮರ, ಶಾಲೆಗೊಂದು ವನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿದರು.