ಉದ್ಘಾಟನೆಗೂ ಮುನ್ನವೇ, ವ್ಯಾಯಾಮ ಶಾಲೆಯಲ್ಲಿ ನೀರು ಜಿನುಗುತ್ತಿರುವುದನ್ನು ಗಮನಿಸಿದ ಲಕ್ಷ್ಮಿ ಹೆಬ್ಬಾಳಕರ, ‘ಈ ರೀತಿಯ ಕಳಪೆ ಕಾಮಗಾರಿ ಕೈಗೊಂಡರೆ ಹೇಗೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರ ಪ್ರಯೋಜನವಾದರೂ ಏನು, ಹೀಗೆ ಉದ್ಘಾಟನೆ ಮಾಡಿದರೆ ಜನರು ಏನನ್ನುತ್ತಾರೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.