<p><strong>ಬೆಳಗಾವಿ:</strong> ‘ವಿದ್ಯಾರ್ಥಿನಿಯರು ಸ್ವಯಂರಕ್ಷಣೆಗೆ ಪೂರಕ ಕೌಶಲ ಬೆಳೆಸಿಕೊಳ್ಳಬೇಕು. ಅದು ಅವರನ್ನು ಕವಚದಂತೆ ರಕ್ಷಿಸುತ್ತದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್ಸಿಯು) ಕುಲಸಚಿವ ಸಂತೋಷ ಕಾಮಗೌಡ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಆರ್ಸಿಯುನ ಮಹಿಳಾ ಸಬಲೀಕರಣ ಕೋಶ, ದೈಹಿಕ ಶಿಕ್ಷಣ ವಿಭಾಗ, ಯಕ್ಷಿತ್ ಯುವ ಫೌಂಡೇಶನ್ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪ್ರಸ್ತುತ ಸಂದರ್ಭ ವಿದ್ಯಾರ್ಥಿನಿಯರಿಗೆ ಸ್ವಯಂ ಸಂರಕ್ಷಣೆ ತರಬೇತಿ ಅಗತ್ಯವಿದೆ. ರಕ್ಷಣಾ ಮತ್ತು ಸುರಕ್ಷತಾ ತಂತ್ರ ಕಲಿಯುವುದರಿಂದ ತುರ್ತು ಸಂದರ್ಭ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದ ತರಬೇತಿ ಆಯೋಜಿಸಿರುವುದು ಪ್ರಮುಖ ಹೆಜ್ಜೆ’ ಎಂದು ಶ್ಲಾಘಿಸಿದರು.</p>.<p>ಯಕ್ಷಿತ್ ಯುವ ಫೌಂಡೇಶನ್ ತರಬೇತುದಾರ ಶ್ರೀಪಾದ ರಾವ್ ಮಾತನಾಡುತ್ತಾ, ‘ಪಿ.ಎಂ ಉಷಾ ಮೇರು ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂಥ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಮನಸ್ಸು ಪ್ರಕ್ಷುಬ್ಧಗೊಳಿಸದೆ ಶಾಂತಿಯಿಂದ ಇರಬೇಕು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದರು.</p>.<p>ಪ್ರಾಚಾರ್ಯ ಪ್ರೊ. ಎಸ್.ಸಿ.ಪಾಟೀಲ, ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಪ್ರೊ. ಚಂದ್ರಿಕಾ ಕೆ.ಬಿ. ಮಾತನಾಡಿದರು.</p>.<p>ಸುಮನಾ ಮುದ್ದಾಪುರ, ರೋಹಿಣಿ ಪಾಟೀಲ, ಪದ್ಮಪ್ರಸಾದ ಹೂಲಿ, ಅವಧೂತ ಪಿ., ವೈಭವ ಪಾಟೀಲ, ಸ್ವಪ್ನಿಲ್ ಪಾಟೀಲ ಉಪಸ್ಥಿತರಿದ್ದರು. ಜಗದೀಶ ಗಸ್ತಿ ಸ್ವಾಗತಿಸಿದರು. ಕರುಣಾ ಅಮೃಸ್ಕರ್ ನಿರೂಪಿಸಿದರು. ಅಶ್ವಿನಿ ಜಾಮೂನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ವಿದ್ಯಾರ್ಥಿನಿಯರು ಸ್ವಯಂರಕ್ಷಣೆಗೆ ಪೂರಕ ಕೌಶಲ ಬೆಳೆಸಿಕೊಳ್ಳಬೇಕು. ಅದು ಅವರನ್ನು ಕವಚದಂತೆ ರಕ್ಷಿಸುತ್ತದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್ಸಿಯು) ಕುಲಸಚಿವ ಸಂತೋಷ ಕಾಮಗೌಡ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಆರ್ಸಿಯುನ ಮಹಿಳಾ ಸಬಲೀಕರಣ ಕೋಶ, ದೈಹಿಕ ಶಿಕ್ಷಣ ವಿಭಾಗ, ಯಕ್ಷಿತ್ ಯುವ ಫೌಂಡೇಶನ್ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪ್ರಸ್ತುತ ಸಂದರ್ಭ ವಿದ್ಯಾರ್ಥಿನಿಯರಿಗೆ ಸ್ವಯಂ ಸಂರಕ್ಷಣೆ ತರಬೇತಿ ಅಗತ್ಯವಿದೆ. ರಕ್ಷಣಾ ಮತ್ತು ಸುರಕ್ಷತಾ ತಂತ್ರ ಕಲಿಯುವುದರಿಂದ ತುರ್ತು ಸಂದರ್ಭ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದ ತರಬೇತಿ ಆಯೋಜಿಸಿರುವುದು ಪ್ರಮುಖ ಹೆಜ್ಜೆ’ ಎಂದು ಶ್ಲಾಘಿಸಿದರು.</p>.<p>ಯಕ್ಷಿತ್ ಯುವ ಫೌಂಡೇಶನ್ ತರಬೇತುದಾರ ಶ್ರೀಪಾದ ರಾವ್ ಮಾತನಾಡುತ್ತಾ, ‘ಪಿ.ಎಂ ಉಷಾ ಮೇರು ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂಥ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಮನಸ್ಸು ಪ್ರಕ್ಷುಬ್ಧಗೊಳಿಸದೆ ಶಾಂತಿಯಿಂದ ಇರಬೇಕು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದರು.</p>.<p>ಪ್ರಾಚಾರ್ಯ ಪ್ರೊ. ಎಸ್.ಸಿ.ಪಾಟೀಲ, ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಪ್ರೊ. ಚಂದ್ರಿಕಾ ಕೆ.ಬಿ. ಮಾತನಾಡಿದರು.</p>.<p>ಸುಮನಾ ಮುದ್ದಾಪುರ, ರೋಹಿಣಿ ಪಾಟೀಲ, ಪದ್ಮಪ್ರಸಾದ ಹೂಲಿ, ಅವಧೂತ ಪಿ., ವೈಭವ ಪಾಟೀಲ, ಸ್ವಪ್ನಿಲ್ ಪಾಟೀಲ ಉಪಸ್ಥಿತರಿದ್ದರು. ಜಗದೀಶ ಗಸ್ತಿ ಸ್ವಾಗತಿಸಿದರು. ಕರುಣಾ ಅಮೃಸ್ಕರ್ ನಿರೂಪಿಸಿದರು. ಅಶ್ವಿನಿ ಜಾಮೂನಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>