‘ಸೈದ್ಧಾಂತಿಕ ನೆಲೆಯಲ್ಲಿ ಕಥನಗಳನ್ನು ರಚಿಸುವ ಕಲೆ ಓದುಗರಲ್ಲೂ ಇರುತ್ತದೆ. ಅದರೊಂದಿಗೆ ಕಥೆಯ ರಚನೆ ಬಹಳ ಮುಖ್ಯವಾದುದು. ಕಥೆಗಾರನ ಪದ ಬಳಕೆಯು ಭಾಷಿಕ ದೃಷ್ಟಿಯಿಂದ ಎಂದು ನೋಡಿದಾಗ ಹೇಗೆ ರಚಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಕಥೆಗಳನ್ನು ಮೊದಲ ತಲೆಮಾರಿನ ಲೇಖಕರು ಸಮರ್ಥವಾಗಿ ದೊಡ್ಡ ವಿಷಯವನ್ನು ಸಹ ಹಾಸುಹೊಕ್ಕಾಗಿ, ಲಾಲಿತ್ಯ, ಹಾಸ್ಯ ಪೂರ್ಣವಾಗಿ ನಿರೂಪಣೆ ಮಾಡಿದ್ದಾರೆ. ಅಲ್ಲದೇ ಕಥೆಯಲ್ಲಿ ಅಸಹಾಯಕತೆ, ಹಕ್ಕು, ಪ್ರತಿಭಟನೆ ಬಗ್ಗೆ ಅರ್ಥಪೂರ್ಣವಾಗಿ ವಿಮರ್ಶೆ ಮಾಡಿದ್ದಾರೆ’ ಎಂದು ಹೇಳಿದರು.