ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿನ ಕನ್ನಡ ನಾಮಫಲಕಗಳಿಗೆ ಹಾಗೂ ಕರ್ನಾಟಕದ ಸಾರಿಗೆ ಬಸ್ಗಳಿಗೆ ಮಸಿ ಬಳಿಯುವುದು ಮೊದಲಾದ ಕೃತ್ಯಗಳಿಂದ ಗಡಿ ವಿವಾದ ಕೆಣಕುತ್ತಿರುವ ಶಿವಸೇನಾ ಕಾರ್ಯಕರ್ತರು, ಇಲ್ಲಿನ ಮಹಾನಗರಪಾಲಿಕೆಯ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ತೆರವುಗೊಳಿಸದಿದ್ದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ವ್ಯವಹಾರ ಬಂದ್ ಮಾಡಿಸಲಾಗುವುದು ಎಂದು ಶಿವಸೇನಾದವರು ಎಚ್ಚರಿಕೆ ನೀಡಿದ್ದಾರೆ.