ಈ ವೇಳೆ ಮಾತನಾಡಿದ ಸುರೇಶ ಅಂಗಡಿ, ‘ಈ ಸಲ ಲಾಕ್ಡೌನ್ನ ಹಿನ್ನೆಲೆಯಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಆಚರಿಸಲಾಗುತ್ತಿದೆ. ಶಿವಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು. ಯಾರು ಕೂಡ ಮನೆಯಿಂದ ಹೊರಗಡೆ ಬರಬಾರದು. ಶಿವಾಜಿ ಮಹಾರಾಜರು ಸಂಕಷ್ಟದ ವೇಳೆ ಯಾವ ರೀತಿ ಹೋರಾಡಿದ್ದರೋ ಅದೇ ರೀತಿ ಅವರ ತತ್ವಾದರ್ಶಗಳನ್ನ ಪಾಲಿಸಿ ನಾವೂ ಕೂಡ ಕೋವಿಡ್–19 ವಿರುದ್ಧ ಹೋರಾಡೋಣ’ ಎಂದರು.