‘ಶಿವಾನಂದ ನೀಲಣ್ಣವರ ಯಾರಿಗೂ ಮೋಸ ಮಾಡಿಲ್ಲ. ಕೋವಿಡ್ ಕಾರಣ ಲಾಕ್ಡೌನ್ ಇದ್ದಾಗಿನಿಂದಲೂ ಎಲ್ಲ ಹೂಡಿಕೆದಾರರಿಗೆ ಅವರು ಸರಿಯಾಗಿ ಹಣ ಮುಟ್ಟಿಸಿದ್ದಾರೆ’ ಎಂದು ಮಹಾರಾಷ್ಟ್ರದ ಮಾಜಿ ಸೈನಿಕ ರೋಹಿತ್ ಅಗ್ರವಾಲ್ ಎಂಬುವರು ಹೇಳಿದ ಆಡಿಯೊ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ‘ಇವರ ಬಳಿ ಹೂಡಿಕೆ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ. ಅವರ ವಿರುದ್ಧ ಯಾವುದೇ ಹೂಡಿಕೆದಾರರು ದೂರೇ ನೀಡಿಲ್ಲ. ಈಗ ನಡೆದಿರುವುದು ರಾಜಕೀಯ ಗಿಮಿಕ್. ಪೊಲೀಸರು ರಾಜಕಾರಣಿಗಳು ಮಾಡುತ್ತಿರುವ ನಾಟಕ. ನೀಲಣ್ಣವರ ಅವರ ಪರವಾಗಿ ಮಹಾರಾಷ್ಟ್ರದಲ್ಲಿ ಸಾವಿರಾರು ಜನ ನಿಂತುಕೊಳ್ಳುತ್ತಾರೆ’ ಎಂದೂ ಅವರು ಆಡಿಯೊದಲ್ಲಿ ಹೇಳಿದ್ಧಾರೆ.