<p><strong>ಬೆಳಗಾವಿ</strong>: ಅನಧಿಕೃತ ಬಡ್ಡಿ ವ್ಯವಹಾರ ಆರೋಪದಡಿ ಇಲ್ಲಿನ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಿ, ವಶಕ್ಕೆ ಪಡೆಯಲಾಯಿತು.</p><p>‘ಶಿವಾನಂದ ನೀಲಣ್ಣವರ ಅವರು ಸುಮಾರು 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿದ್ದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಖ್ಯೆ ಇನ್ನೂ ಸ್ಪಷ್ಟವಾಗಬೇಕಿದೆ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದಾರೆ. ಆದರೆ, ಯಾವುದೂ ಆರ್ಬಿಐ ನಿಯಮಗಳ ಪ್ರಕಾರ ಇಲ್ಲ. ಮುಂಜಾಗೃತಾ ಕ್ರಮವಾಗಿ ಉಪವಿಭಾಗಾಧಿಕಾರಿ ದಾಳಿ ನಡೆಸಿದ್ದಾರೆ. ನಾವು ಕಾನೂನು ಕ್ರಮ ಜರುಗಿಸಿ ಬಂಧಿಸಿದ್ದೇವೆ. ರಾತ್ರಿ ವಿಚಾರಣೆ ನಡೆಸಲಾಗುವುದು. ಬೆಳಿಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದರು.</p><p>‘ಬೆಳಗಾವಿ: ಜಿಲ್ಲಾಧಿಕಾರಿ ನಿರ್ದೇಶನದಂತೆ ಶಿವಂ ಅಸೋಸೆಯೆಟ್ ಕಂಪನಿ ಮೇಲೆ ದಾಳಿ ಮಾಡಿ ಶಿವಾನಂದ ನಿಲಣ್ಣವರನ್ನು ಅವರನ್ನು ಬಂಧಿಸಲಾಗಿದೆ. ಸಹಕಾರ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿ ದಾಳಿ ಮಾಡಿದ್ದೇವೆ. ದಾಳಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಸಹಕಾರ ಇಲಾಖೆ ಅಧಿಕಾರಿಗಳಿಂದ ಎಫ್ ಐ ಆರ್ ಆಗಿದೆ. ಈ ಪ್ರಕರಣದಲ್ಲಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಆಗಿದೆ. ತನಿಖೆ ಮಾಡುತ್ತೇವೆ’ ಎಂದು ದಾಳಿಯ ನೇತೃತ್ವ ವಹಿಸಿದ್ದ ಉಪವಿಭಾಗಾಧಿಕಾರಿ ಶ್ರವಣ ನಾಯಕ ತಿಳಿಸಿದರು.</p><p>ಎಲ್ಲೆಲ್ಲಿ ದಾಳಿ: ಶಿವಾನಂದ ಅವರ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಗುರುವಾರ ನಸುಕಿನಲ್ಲೇ ದಾಳಿ ಆರಂಭಿಸಲಾಯಿತು. ಶುಕ್ರವಾರ ಕೂಡ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಯಿತು. ಮಧ್ಯಾಹ್ನ ಶಿವಾನಂದ ಅವರನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ, ರಾತ್ರಿ 8ಕ್ಕೆ ಪ್ರಕರಣ ದಾಖಲಿಸಿದರು.</p><p>ದಾಳಿ ಮಾಡಿದ ಉಪವಿಭಾಗಾಧಿಕಾರಿ ನೇತೃತ್ವದ ತಂಡ 24 ತಾಸು ತಪಾಸಣೆ ನಡೆಸಿದೆ. ಈ ವೇಳೆ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ.</p><p>ಶಿವಾನಂದ ಅವರು ದಶಕಗಳಿಂದ ಹೂಡಿಕೆ ವ್ಯವಹಾರ ನಡೆಸುತ್ತಿದ್ದರೂ ಯಾರ ಗಮನಕ್ಕೂ ಇರಲಿಲ್ಲ. ಆದರೆ, ಕಡೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ‘ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರುವುದಿಲ್ಲ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಾದರೆ ನಾನು 2028ಕ್ಕೆ ಸಿ.ಎಂ ಆಗಿ ತೋರಿಸಲೇನು’ ಎಂದೆಲ್ಲ ಹೇಳಿಕೊಂಡಿದ್ದರು.</p><p>ಮೇ 17ರಂದು 20 ಸಾವಿರ ಜನರನ್ನು ಸೇರಿಸಿ ಬೆಳಗಾವಿ ನಗರದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರ ಕಟೌಟ್ಗಳು ನಗರದಲ್ಲಿ ರಾರಾಜಿಸಿದ್ದವು. ಎಚ್ಷೆತ್ತುಕೊಂಡ ಅಧಿಕಾರಿಗಳು ನೀಲಣ್ಣವರ ಮನೆ, ಕಚೇರಿ ಮೇಲೆ ದಾಳಿ ಮಾಡಿದರು. 17ರ ಕಾರ್ಯಕ್ರಮ ರದ್ದುಮಾಡಿದ ಪಾಲಿಕೆ ಅಧಿಕಾರಿಗಳು ಪೋಸ್ಟರುಗಳನ್ನು ತೆರವು ಮಾಡಿದರು.</p><p><strong>ಯಾರು ಈ ನೀಲಣ್ಣವರು?</strong></p><p>ಶಿವಾನಂದ ಅವರು ಹುಬ್ಬಳ್ಳಿಯ ಉಣಕಲ್ ಮೂಲದವರು. ಇವರ ತಂದೆ ಸೇನೆಯಲ್ಲಿದ್ದರು. ನಿವೃತ್ತಿ ಬಳಿಕ ಕೆಇಬಿನಲ್ಲಿ ಕೆಲಸ ಮಾಡುತ್ತಿದ್ದಾಗ ನಿಧನರಾದರು. ಆ ನೌಕರಿ ಶಿವಾನಂದ ಸೋದರರೊಬ್ಬರಿಗೆ ಸಿಕ್ಕಿದೆ. ಅವರಿಗೆ ಬೆಳಗಾವಿಗೆ ವರ್ಗವಾದಾಗ ಇಡೀ ಕುಟುಂಬ ಇಲ್ಲಿಗೆ ಬಂತು.</p><p>ದ್ವಿತೀಯ ಪಿಯು ಓದಿರುವ ಶಿವಾನಂದ ಆರಂಭದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದರು. 2004ರಿಂದ 2006ರವೆಗೆ ಆಟೊದಲ್ಲಿ ಫ್ರಿಜ್ ಇಟ್ಟುಕೊಂಡು ಐಸ್ ಕ್ರೀಮ್ ಮಾರಿದ್ದರು. ಮುಂದೆ ಐಸ್ ಕ್ರೀಮ್ ಕಾರ್ಖಾನೆ ಹಾಕಿದ್ದರು. 2012ರ ನಂತರ ಶಿವಂ ಅಸೋಸಿಯೇಟ್ಸ್ ಎಂಬ ಹೂಡಿಕೆ ಸಂಸ್ಥೆ ಆರಂಭಿಸಿದರು.</p><p>‘ಅಕ್ಯೂಮೆನ್’ ಆ್ಯಪ್ ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ಹೂಡಿಕೆಯಾಗಿದೆ ಎಂಬ ಮಾಹಿತಿ ಕೂಡ ಮೂಲಗಳಿಂದ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಅನಧಿಕೃತ ಬಡ್ಡಿ ವ್ಯವಹಾರ ಆರೋಪದಡಿ ಇಲ್ಲಿನ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಿ, ವಶಕ್ಕೆ ಪಡೆಯಲಾಯಿತು.</p><p>‘ಶಿವಾನಂದ ನೀಲಣ್ಣವರ ಅವರು ಸುಮಾರು 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿದ್ದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಖ್ಯೆ ಇನ್ನೂ ಸ್ಪಷ್ಟವಾಗಬೇಕಿದೆ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದಾರೆ. ಆದರೆ, ಯಾವುದೂ ಆರ್ಬಿಐ ನಿಯಮಗಳ ಪ್ರಕಾರ ಇಲ್ಲ. ಮುಂಜಾಗೃತಾ ಕ್ರಮವಾಗಿ ಉಪವಿಭಾಗಾಧಿಕಾರಿ ದಾಳಿ ನಡೆಸಿದ್ದಾರೆ. ನಾವು ಕಾನೂನು ಕ್ರಮ ಜರುಗಿಸಿ ಬಂಧಿಸಿದ್ದೇವೆ. ರಾತ್ರಿ ವಿಚಾರಣೆ ನಡೆಸಲಾಗುವುದು. ಬೆಳಿಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದರು.</p><p>‘ಬೆಳಗಾವಿ: ಜಿಲ್ಲಾಧಿಕಾರಿ ನಿರ್ದೇಶನದಂತೆ ಶಿವಂ ಅಸೋಸೆಯೆಟ್ ಕಂಪನಿ ಮೇಲೆ ದಾಳಿ ಮಾಡಿ ಶಿವಾನಂದ ನಿಲಣ್ಣವರನ್ನು ಅವರನ್ನು ಬಂಧಿಸಲಾಗಿದೆ. ಸಹಕಾರ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿ ದಾಳಿ ಮಾಡಿದ್ದೇವೆ. ದಾಳಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಸಹಕಾರ ಇಲಾಖೆ ಅಧಿಕಾರಿಗಳಿಂದ ಎಫ್ ಐ ಆರ್ ಆಗಿದೆ. ಈ ಪ್ರಕರಣದಲ್ಲಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಆಗಿದೆ. ತನಿಖೆ ಮಾಡುತ್ತೇವೆ’ ಎಂದು ದಾಳಿಯ ನೇತೃತ್ವ ವಹಿಸಿದ್ದ ಉಪವಿಭಾಗಾಧಿಕಾರಿ ಶ್ರವಣ ನಾಯಕ ತಿಳಿಸಿದರು.</p><p>ಎಲ್ಲೆಲ್ಲಿ ದಾಳಿ: ಶಿವಾನಂದ ಅವರ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಗುರುವಾರ ನಸುಕಿನಲ್ಲೇ ದಾಳಿ ಆರಂಭಿಸಲಾಯಿತು. ಶುಕ್ರವಾರ ಕೂಡ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಯಿತು. ಮಧ್ಯಾಹ್ನ ಶಿವಾನಂದ ಅವರನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ, ರಾತ್ರಿ 8ಕ್ಕೆ ಪ್ರಕರಣ ದಾಖಲಿಸಿದರು.</p><p>ದಾಳಿ ಮಾಡಿದ ಉಪವಿಭಾಗಾಧಿಕಾರಿ ನೇತೃತ್ವದ ತಂಡ 24 ತಾಸು ತಪಾಸಣೆ ನಡೆಸಿದೆ. ಈ ವೇಳೆ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ.</p><p>ಶಿವಾನಂದ ಅವರು ದಶಕಗಳಿಂದ ಹೂಡಿಕೆ ವ್ಯವಹಾರ ನಡೆಸುತ್ತಿದ್ದರೂ ಯಾರ ಗಮನಕ್ಕೂ ಇರಲಿಲ್ಲ. ಆದರೆ, ಕಡೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ‘ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರುವುದಿಲ್ಲ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಾದರೆ ನಾನು 2028ಕ್ಕೆ ಸಿ.ಎಂ ಆಗಿ ತೋರಿಸಲೇನು’ ಎಂದೆಲ್ಲ ಹೇಳಿಕೊಂಡಿದ್ದರು.</p><p>ಮೇ 17ರಂದು 20 ಸಾವಿರ ಜನರನ್ನು ಸೇರಿಸಿ ಬೆಳಗಾವಿ ನಗರದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರ ಕಟೌಟ್ಗಳು ನಗರದಲ್ಲಿ ರಾರಾಜಿಸಿದ್ದವು. ಎಚ್ಷೆತ್ತುಕೊಂಡ ಅಧಿಕಾರಿಗಳು ನೀಲಣ್ಣವರ ಮನೆ, ಕಚೇರಿ ಮೇಲೆ ದಾಳಿ ಮಾಡಿದರು. 17ರ ಕಾರ್ಯಕ್ರಮ ರದ್ದುಮಾಡಿದ ಪಾಲಿಕೆ ಅಧಿಕಾರಿಗಳು ಪೋಸ್ಟರುಗಳನ್ನು ತೆರವು ಮಾಡಿದರು.</p><p><strong>ಯಾರು ಈ ನೀಲಣ್ಣವರು?</strong></p><p>ಶಿವಾನಂದ ಅವರು ಹುಬ್ಬಳ್ಳಿಯ ಉಣಕಲ್ ಮೂಲದವರು. ಇವರ ತಂದೆ ಸೇನೆಯಲ್ಲಿದ್ದರು. ನಿವೃತ್ತಿ ಬಳಿಕ ಕೆಇಬಿನಲ್ಲಿ ಕೆಲಸ ಮಾಡುತ್ತಿದ್ದಾಗ ನಿಧನರಾದರು. ಆ ನೌಕರಿ ಶಿವಾನಂದ ಸೋದರರೊಬ್ಬರಿಗೆ ಸಿಕ್ಕಿದೆ. ಅವರಿಗೆ ಬೆಳಗಾವಿಗೆ ವರ್ಗವಾದಾಗ ಇಡೀ ಕುಟುಂಬ ಇಲ್ಲಿಗೆ ಬಂತು.</p><p>ದ್ವಿತೀಯ ಪಿಯು ಓದಿರುವ ಶಿವಾನಂದ ಆರಂಭದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದರು. 2004ರಿಂದ 2006ರವೆಗೆ ಆಟೊದಲ್ಲಿ ಫ್ರಿಜ್ ಇಟ್ಟುಕೊಂಡು ಐಸ್ ಕ್ರೀಮ್ ಮಾರಿದ್ದರು. ಮುಂದೆ ಐಸ್ ಕ್ರೀಮ್ ಕಾರ್ಖಾನೆ ಹಾಕಿದ್ದರು. 2012ರ ನಂತರ ಶಿವಂ ಅಸೋಸಿಯೇಟ್ಸ್ ಎಂಬ ಹೂಡಿಕೆ ಸಂಸ್ಥೆ ಆರಂಭಿಸಿದರು.</p><p>‘ಅಕ್ಯೂಮೆನ್’ ಆ್ಯಪ್ ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ಹೂಡಿಕೆಯಾಗಿದೆ ಎಂಬ ಮಾಹಿತಿ ಕೂಡ ಮೂಲಗಳಿಂದ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>