<p>ರಾಮದುರ್ಗ: ತಾಲ್ಲೂಕಿನ ಮುಳ್ಳೂರು ಬೆಟ್ಟದಲ್ಲಿರುವ 78 ಅಡಿ ಎತ್ತರದ ಶಿವನಮೂರ್ತಿ ಹಾಗೂ 22 ಅಡಿ ಎತ್ತರದ ನಂದಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.</p>.<p>ರಾಜ್ಯ ಮತ್ತು ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತಿ ಭೇದವಿಲ್ಲದೇ ಸರ್ವ ಧರ್ಮೀಯರು ಭಾಗವಹಿಸಿದ್ದು, ಭಾವೈಕ್ಯತೆಗೆ ಸಾಕ್ಷಿಯಾಯಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ಮಹಾಶಿವರಾತ್ರಿ ಉತ್ಸವ ಆಚರಿಸಲಾಗಿತ್ತು. ಆದರೆ ಈ ಭಾರಿ ಕೋವಿಡ್–19 ಹಾವಳಿ ತಗ್ಗಿದ್ದರಿಂದ ಉತ್ಸವಕ್ಕೆ ವಿಶೇಷ ಮೆರಗು ಬಂದಿತ್ತು.</p>.<p>ಸಾವಿರಾರು ಭಕ್ತರು ಜೈಕಾರ ಮತ್ತು ಶಿವನಾಮ ಜಪದ ಮಧ್ಯೆ ಕೋಟೆಗಳ ನಾಡು ಸಂಭ್ರಮಿಸಿತು. ಮಹಾಶಿವರಾತ್ರಿ ಆಚರಣೆಯಲ್ಲಿ ಸಹಸ್ರಾರು ಭಕ್ತರು ಶನಿವಾರ ಓಂ ನಮಃ ಶಿವಾಯ ಘೋಷದೊಂದಿಗೆ ಪಾಲ್ಗೊಂಡಿದ್ದರು.</p>.<p>ರಾಮೇಶ್ವರ ದೇವಸ್ಥಾನದ ಧ್ಯಾನ ಮಂದಿರದ ಶಿವಲಿಂಗುವಿಗೆ ರುದ್ರಾಭಿಷೇಕ, ಬಿಲ್ವಾರ್ಚಣೆ ಮಾಡಲಾಯಿತು. ಇದರ ಜೊತೆಗೆ ಶಿವನ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.<br />ಶಿವನ ಮೂರ್ತಿ ಮುಂದಿನ 22 ಅಡಿ ಎತ್ತರದ ನಂದಿ ವಿಗ್ರಹಕ್ಕೆ<br />ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು.</p>.<p>ಸುಮಾರು 78 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣವಾದ ಬಳಿಕ ಮುಳ್ಳೂರು ಬೆಟ್ಟವೂ ಒಂದು ರೀತಿಯಲ್ಲಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮಹಾಶಿವರಾತ್ರಿ ಆಚರಣೆಗೆ ಆಗಮಿಸಿದ ಭಕ್ತರಿಗೆ ಕುಡಿಯುವ ನೀರು, ಉಪವಾಸದ ಫಲಹಾರ ಸಮಿತಿ ವ್ಯವಸ್ಥೆ ಮಾಡಿತ್ತು.</p>.<p class="Subhead">ಸಂಕೇಶ್ವರ ವರದಿ: ಗಡಿ ಪಟ್ಟಣ ಸಂಕೇಶ್ವರದಲ್ಲಿ ಶಿವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.</p>.<p>ಪಟ್ಟಣದ ಭಕ್ತರು ಶಂಕರಲಿಂಗನ ಗುಡಿಗೆ ತೆರಳಿ ಶಿವನ ದರ್ಶನ ಪಡೆದರು. ಮಹಿಳೆಯರು, ಪುರುಷರು, ಮಕ್ಕಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಉಪವಾಸದ ಪ್ರಸಾದ ಸ್ವೀಕರಿಸಿದರು.</p>.<p>ನಿಪ್ಪಾಣಿ ವರದಿ: ತಾಲ್ಲೂಕಿನ ವಿವಿಧೆಡೆಯ ಮಹಾದೇವ ಮಂದಿರಗಳಲ್ಲಿ ಮಂಗಳವಾರ ಮಹಾಶಿವರಾತ್ರಿ ಭಕ್ತರು ಸಂಭ್ರಮದಿಂದ ಆಚರಿಸಿದರು.</p>.<p>ಸ್ಥಳೀಯ ಮಹಾದೇವಗಲ್ಲಿಯ ಪುರಾತನ ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಹಾದೇವನಿಗೆ, ಶಿವಲಿಂಗಕ್ಕೆ ಹೂಗಳಿಂದ ಆಕರ್ಷಕವಾಗಿ ಅಲಂಕರಿ<br />ಸಲಾಗಿತ್ತು. ಬೆಳಿಗ್ಗೆ ದಾದಾರಾಜೆ ದೇಸಾಯಿ ನಿಪ್ಪಾಣಕರ ಸರ್ಕಾರ ದಂಪತಿಯಿಂದ ಅಭಿಷೇಕ ನಡೆಯಿತು. ರೋಹಿತ ಚೌಗುಲೆ ಹಾಗೂ ಸಂಜಯ ಚೌಗುಲೆ ಅವರಿಂದ ರಥದ ಕಳಸ ಪೂಜೆ ಜರುಗಿತು. ಏಕಾದಶಿ ಅಂಗವಾಗಿ ಉದ್ಯಮಿ ಉದಯಭಾಯಿ ಶಹಾ ಅವರಿಂದ ಭಕ್ತಾದಿಗಳಿಗೆ ಖಿಚಡಿಯ ಪ್ರಸಾದ ವಿತರಿಸಲಾಯಿತು.</p>.<p>ಮಂದಿರದ ಆವರಣದಲ್ಲಿ ಮಹಾರಾಷ್ಟ್ರದ ಪುಣೆಯ ಸ್ವಪ್ನಿಲ್ ಸರಪಳೆ ಇವರಿಂದ ತಯಾರಿಸಲ್ಪಟ್ಟ ಸುಮಾರು 20 ಅಡಿಯ ಹೂವಿನಲ್ಲಿಯ ಮಹಾದೇವನ ಪ್ರತಿಮೆ, ಮಂದಿರದಲ್ಲಿ ಆಕರ್ಷಕ ಅಲಂಕಾರಗೊಂಡಿದ್ದ ಚಿತ್ರಕೃತಿಗಳು ಆಕರ್ಷಕ ಕೇಂದ್ರಬಿಂದುವಾಗಿದ್ದವು. ಎಲ್ಲ ಕಲಾಕೃತಿಗಳಿಗೆ ₹6 ಲಕ್ಷ ಮೊತ್ತದ ನಾಲ್ಕು ಕಂಟೇನರ್ ಹೂವುಗಳನ್ನು ಕೊಂಡುಕೊಳ್ಳಲಾಗಿದೆ.</p>.<p>ಮಹಾಶಿವರಾತ್ರಿ ಹಾಗೂ ರಥೋತ್ಸವದ ಅಂಗವಾಗಿ ಫೆ.21ರಂದು ಮ.1ಕ್ಕೆ ಭವ್ಯ ರಥೋತ್ಸವ ಹಾಗೂ ಫೆ.24ರಂದು ಮ.12ಕ್ಕೆ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇಗುಲದ ಮುಖ್ಯಸ್ಥ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಹೇಳಿದರು.</p>.<p>ಚಂದ್ರಕಾಂತ ಕೋಠಿವಾಲೆ, ಕಾಕಾಸಾಹೇಬ ಪಾಟೀಲ, ಜಯವಂತ ಭಾಟಲೆ, ಪ್ರವೀನ ಬಾಗೇವಾಡಿ, ರವಿಂದ್ರ ಕೋಠಿವಾಲೆ, ಮಲ್ಲಿಕಾರ್ಜುನ ಗಡ್ಕರಿ, ಸಂಜಯ ಮೊಳವಾಡೆ, ಸುರೇಶ ಶೆಟ್ಟಿ, ರವಿಂದ್ರ ಶೆಟ್ಟಿ, ಸದಾನಂದ ಚಂದ್ರಕುಡೆ, ಬಾಬಾಸಾಹೇಬ ಚಂದ್ರಕುಡೆ, ಅಣ್ಣಾ<br />ಸಾಹೇಬ ಜಾಧವ, ಮಹೇಶ ಬಾಗೇ<br />ವಾಡಿ, ವಿಜಯ ಚಂದ್ರಕುಡೆ, ವಿಜಯ ಧುಮಾಲೆ, ಶಿವಕಾಂತ ಚಂದ್ರಕುಡೆ, ಲಕ್ಷ್ಮಣ ಠಗರೆ ದೇವರ ದರ್ಶನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮದುರ್ಗ: ತಾಲ್ಲೂಕಿನ ಮುಳ್ಳೂರು ಬೆಟ್ಟದಲ್ಲಿರುವ 78 ಅಡಿ ಎತ್ತರದ ಶಿವನಮೂರ್ತಿ ಹಾಗೂ 22 ಅಡಿ ಎತ್ತರದ ನಂದಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.</p>.<p>ರಾಜ್ಯ ಮತ್ತು ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತಿ ಭೇದವಿಲ್ಲದೇ ಸರ್ವ ಧರ್ಮೀಯರು ಭಾಗವಹಿಸಿದ್ದು, ಭಾವೈಕ್ಯತೆಗೆ ಸಾಕ್ಷಿಯಾಯಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ಮಹಾಶಿವರಾತ್ರಿ ಉತ್ಸವ ಆಚರಿಸಲಾಗಿತ್ತು. ಆದರೆ ಈ ಭಾರಿ ಕೋವಿಡ್–19 ಹಾವಳಿ ತಗ್ಗಿದ್ದರಿಂದ ಉತ್ಸವಕ್ಕೆ ವಿಶೇಷ ಮೆರಗು ಬಂದಿತ್ತು.</p>.<p>ಸಾವಿರಾರು ಭಕ್ತರು ಜೈಕಾರ ಮತ್ತು ಶಿವನಾಮ ಜಪದ ಮಧ್ಯೆ ಕೋಟೆಗಳ ನಾಡು ಸಂಭ್ರಮಿಸಿತು. ಮಹಾಶಿವರಾತ್ರಿ ಆಚರಣೆಯಲ್ಲಿ ಸಹಸ್ರಾರು ಭಕ್ತರು ಶನಿವಾರ ಓಂ ನಮಃ ಶಿವಾಯ ಘೋಷದೊಂದಿಗೆ ಪಾಲ್ಗೊಂಡಿದ್ದರು.</p>.<p>ರಾಮೇಶ್ವರ ದೇವಸ್ಥಾನದ ಧ್ಯಾನ ಮಂದಿರದ ಶಿವಲಿಂಗುವಿಗೆ ರುದ್ರಾಭಿಷೇಕ, ಬಿಲ್ವಾರ್ಚಣೆ ಮಾಡಲಾಯಿತು. ಇದರ ಜೊತೆಗೆ ಶಿವನ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.<br />ಶಿವನ ಮೂರ್ತಿ ಮುಂದಿನ 22 ಅಡಿ ಎತ್ತರದ ನಂದಿ ವಿಗ್ರಹಕ್ಕೆ<br />ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು.</p>.<p>ಸುಮಾರು 78 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣವಾದ ಬಳಿಕ ಮುಳ್ಳೂರು ಬೆಟ್ಟವೂ ಒಂದು ರೀತಿಯಲ್ಲಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮಹಾಶಿವರಾತ್ರಿ ಆಚರಣೆಗೆ ಆಗಮಿಸಿದ ಭಕ್ತರಿಗೆ ಕುಡಿಯುವ ನೀರು, ಉಪವಾಸದ ಫಲಹಾರ ಸಮಿತಿ ವ್ಯವಸ್ಥೆ ಮಾಡಿತ್ತು.</p>.<p class="Subhead">ಸಂಕೇಶ್ವರ ವರದಿ: ಗಡಿ ಪಟ್ಟಣ ಸಂಕೇಶ್ವರದಲ್ಲಿ ಶಿವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.</p>.<p>ಪಟ್ಟಣದ ಭಕ್ತರು ಶಂಕರಲಿಂಗನ ಗುಡಿಗೆ ತೆರಳಿ ಶಿವನ ದರ್ಶನ ಪಡೆದರು. ಮಹಿಳೆಯರು, ಪುರುಷರು, ಮಕ್ಕಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಉಪವಾಸದ ಪ್ರಸಾದ ಸ್ವೀಕರಿಸಿದರು.</p>.<p>ನಿಪ್ಪಾಣಿ ವರದಿ: ತಾಲ್ಲೂಕಿನ ವಿವಿಧೆಡೆಯ ಮಹಾದೇವ ಮಂದಿರಗಳಲ್ಲಿ ಮಂಗಳವಾರ ಮಹಾಶಿವರಾತ್ರಿ ಭಕ್ತರು ಸಂಭ್ರಮದಿಂದ ಆಚರಿಸಿದರು.</p>.<p>ಸ್ಥಳೀಯ ಮಹಾದೇವಗಲ್ಲಿಯ ಪುರಾತನ ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಹಾದೇವನಿಗೆ, ಶಿವಲಿಂಗಕ್ಕೆ ಹೂಗಳಿಂದ ಆಕರ್ಷಕವಾಗಿ ಅಲಂಕರಿ<br />ಸಲಾಗಿತ್ತು. ಬೆಳಿಗ್ಗೆ ದಾದಾರಾಜೆ ದೇಸಾಯಿ ನಿಪ್ಪಾಣಕರ ಸರ್ಕಾರ ದಂಪತಿಯಿಂದ ಅಭಿಷೇಕ ನಡೆಯಿತು. ರೋಹಿತ ಚೌಗುಲೆ ಹಾಗೂ ಸಂಜಯ ಚೌಗುಲೆ ಅವರಿಂದ ರಥದ ಕಳಸ ಪೂಜೆ ಜರುಗಿತು. ಏಕಾದಶಿ ಅಂಗವಾಗಿ ಉದ್ಯಮಿ ಉದಯಭಾಯಿ ಶಹಾ ಅವರಿಂದ ಭಕ್ತಾದಿಗಳಿಗೆ ಖಿಚಡಿಯ ಪ್ರಸಾದ ವಿತರಿಸಲಾಯಿತು.</p>.<p>ಮಂದಿರದ ಆವರಣದಲ್ಲಿ ಮಹಾರಾಷ್ಟ್ರದ ಪುಣೆಯ ಸ್ವಪ್ನಿಲ್ ಸರಪಳೆ ಇವರಿಂದ ತಯಾರಿಸಲ್ಪಟ್ಟ ಸುಮಾರು 20 ಅಡಿಯ ಹೂವಿನಲ್ಲಿಯ ಮಹಾದೇವನ ಪ್ರತಿಮೆ, ಮಂದಿರದಲ್ಲಿ ಆಕರ್ಷಕ ಅಲಂಕಾರಗೊಂಡಿದ್ದ ಚಿತ್ರಕೃತಿಗಳು ಆಕರ್ಷಕ ಕೇಂದ್ರಬಿಂದುವಾಗಿದ್ದವು. ಎಲ್ಲ ಕಲಾಕೃತಿಗಳಿಗೆ ₹6 ಲಕ್ಷ ಮೊತ್ತದ ನಾಲ್ಕು ಕಂಟೇನರ್ ಹೂವುಗಳನ್ನು ಕೊಂಡುಕೊಳ್ಳಲಾಗಿದೆ.</p>.<p>ಮಹಾಶಿವರಾತ್ರಿ ಹಾಗೂ ರಥೋತ್ಸವದ ಅಂಗವಾಗಿ ಫೆ.21ರಂದು ಮ.1ಕ್ಕೆ ಭವ್ಯ ರಥೋತ್ಸವ ಹಾಗೂ ಫೆ.24ರಂದು ಮ.12ಕ್ಕೆ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇಗುಲದ ಮುಖ್ಯಸ್ಥ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಹೇಳಿದರು.</p>.<p>ಚಂದ್ರಕಾಂತ ಕೋಠಿವಾಲೆ, ಕಾಕಾಸಾಹೇಬ ಪಾಟೀಲ, ಜಯವಂತ ಭಾಟಲೆ, ಪ್ರವೀನ ಬಾಗೇವಾಡಿ, ರವಿಂದ್ರ ಕೋಠಿವಾಲೆ, ಮಲ್ಲಿಕಾರ್ಜುನ ಗಡ್ಕರಿ, ಸಂಜಯ ಮೊಳವಾಡೆ, ಸುರೇಶ ಶೆಟ್ಟಿ, ರವಿಂದ್ರ ಶೆಟ್ಟಿ, ಸದಾನಂದ ಚಂದ್ರಕುಡೆ, ಬಾಬಾಸಾಹೇಬ ಚಂದ್ರಕುಡೆ, ಅಣ್ಣಾ<br />ಸಾಹೇಬ ಜಾಧವ, ಮಹೇಶ ಬಾಗೇ<br />ವಾಡಿ, ವಿಜಯ ಚಂದ್ರಕುಡೆ, ವಿಜಯ ಧುಮಾಲೆ, ಶಿವಕಾಂತ ಚಂದ್ರಕುಡೆ, ಲಕ್ಷ್ಮಣ ಠಗರೆ ದೇವರ ದರ್ಶನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>