ಸಂತೋಷ್ ಪಾಟೀಲ್ ಅವರ ಗುತ್ತಿಗೆ ಹಣ ₹4 ಕೋಟಿ ಕೂಡಲೇ ಪಾವತಿಸಬೇಕು: ಸಿದ್ದರಾಮಯ್ಯ

ಬೆಳಗಾವಿ: ಅಮಾನವೀಯವಾದ ಸಾವಾಗಿದೆ. ಇದಕ್ಕೆ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಎಂದು ಸಂತೋಷ್ ಪಾಟೀಲ ಸಂದೇಶ ಕಳುಹಿಸಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅವರ ತಾಯಿ ಹಾಗೂ ಪತ್ನಿಯೂ ಆದೇ ಮಾತು ಹೇಳಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು; ನಮಗೆ ನ್ಯಾಯ ಸಿಗಬೇಕು ಎಂದು ಸಂತೋಷ್ ಮನೆಗೆ ಭೇಟಿ ನೀಡಿದ ಬಳಿಕ ಸಿದ್ದರಾಮಯ್ಯ ಹೇಳಿದರು. ಅವರಿಗೆ ಸಾಂತ್ವನ ಹೇಳಿದ್ದೇವೆ. ನ್ಯಾಯ ಕೊಡಿಸುವುದಕ್ಕಾಗಿ ಹೋರಾಡುತ್ತೇವೆ’ ಎಂದರು.
‘ಸಂತೋಷ್, ಸಚಿವರು ಹೇಳದೆ ಕೆಲಸ ಮಾಡಿರುವುದಿಲ್ಲ. ಕಾರ್ಯಾದೇಶ, ಬಿಲ್ ಪಾವತಿಸುವಾಗ ಶೇ 40ರಷ್ಟು ಕಮಿಷನ್ ಕೇಳಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಸಂಬಂಧಿಸಿದ ₹ 4 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಏಕೆಂದರೆ, ಅವರು ಸಾಲ ಮಾಡಿ, ಚಿನ್ನ ಗಿರವಿ ಇಟ್ಟು ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
‘ಸಚಿವರ ಭ್ರಷ್ಟಾಚಾರದಿಂದಾಗಿ ಇಡೀ ಕುಟುಂಬ ಅನಾಥವಾಗಿದೆ’ ಎಂದರು.
‘ಸಚಿವರೇ ಕಾರಣ ಎಂದು ನೇರವಾಗಿ ಆರೋಪಿಸಿರುವುದರಿಂದ ಇದು ಕೊಲೆಯಾಗುತ್ತದೆ. ಹೀಗಾಗಿ, ಆರೋಪಿಯನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.
‘ಈಶ್ವರಪ್ಪ ಸೇರಿದಂತೆ ಎಲ್ಲ ಸಚಿವರು ರಾಕ್ಷಸಪ್ರವೃತ್ತಿಯವರಾಗಿದ್ದಾರೆ. ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸಂತೋಷ್ ಕುಟುಂಬಕ್ಕೆ ನ್ಯಾಯ ಕೊಡಿಸಲು ಕಾಂಗ್ರೆಸ್ನಿಂದ ಹೋರಾಟ ಮಾಡಲಾಗುವುದು’ ಎಂದರು.
‘ಅವರು ಬೇಜವಾಬ್ದಾರಿ ಸಚಿವ. ಭ್ರಷ್ಟಾಚಾರಿ. ಅಪರಾಧಿ ಸ್ಥಾನದಲ್ಲಿ ನಿಂತವರು ಸತ್ಯ ಹೇಳುತ್ತಾರೆಯೇ?’ ಎಂದು ಕೇಳಿದರು.
‘ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ. ಅವೆಲ್ಲವನ್ನೂ ನಂಬಲಾಗದು’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇವುಗಳನ್ನೂ ಓದಿ..
ರಾಜೀನಾಮೆ ಕೊಡಲಾರೆ ಎಂದ ಸಚಿವ ಈಶ್ವರಪ್ಪ, ಕಾಂಗ್ರೆಸ್ಗೆ ಎರಡು ಪ್ರಶ್ನೆ
ಸಂತೋಷ್ ಕುಟುಂಬಸ್ಥರ ದೂರು ಆಧರಿಸಿ ಈಶ್ವರಪ್ಪ ಹಾಗೂ ಇಬ್ಬರ ಮೇಲೆ ಎಫ್ಐರ್: ಐಜಿಪಿ
ಶೇ 40ರಷ್ಟು ಕಮಿಷನ್: ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಸಂತೋಷ ಪಾಟೀಲ ಆತ್ಮಹತ್ಯೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.