ಅಖಿಲ ಭಾರತ ಸಕ್ಕರೆ ತಂತ್ರಜ್ಞ ಸಂಘದಿಂದ ಅ.20ರಿಂದ ಅ.21ರವರೆಗೆ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಪದಕ ಪ್ರದಾನ ಮಾಡಲಾಯಿತು. ಪ್ರಬಂಧವನ್ನು ಸಂಸ್ಥೆಯ ಹಿರಿಯ ಸಲಹೆಗಾರ ಡಾ,ಎಂ.ಬಿ. ಲೋಂಡೆ, ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ಹಾಗೂ ಸಕ್ಕರೆ ಎಂಜಿನಿಯರ್ ಎ. ಗುರುನಾಥ ಬರೆದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸಂಸ್ಥೆಗೆ ಬೆಳ್ಳಿ ಪದಕದ ಪ್ರಶಸ್ತಿಯು ಪ್ರಥಮ ಬಾರಿಗೆ ದೊರೆದಿದೆ. ಸಂಸ್ಥೆಯು ಕಬ್ಬಿನ ಹೊಸ ತಳಿಗಳ ಆಯ್ಕೆಯ ಕೇಂದ್ರ ಹಾಗೂ ಸಕ್ಕರೆ ಉದ್ದಿಮೆಗೆ ಸಂಬಂಧಪಟ್ಟ ಪದಾರ್ಥಗಳನ್ನು ವಿಶ್ಲೇಷಿಸಲು ಅಧಿಕೃತ ಪ್ರಯೋಗಾಲಯ ಹೊಂದಿದೆ.