ವಿವಿಧ ಕ್ಷೇತ್ರಗಳ ಸಾಧಕರಾದ ಮಹಾವೀರ ನಿಲಜಗಿ, ಜಯಶ್ರೀ ನಿರಾಕಾರಿ, ಗಣಪತಿ ಉಪ್ಪಾರ, ಡಾ.ವಿಶ್ವನಾಥ ಉಪ್ಪಲದಿನ್ನಿ, ಶೈಲಜಾ ಕುಲಕರ್ಣಿ, ಪೂಜಾ ತಳವಾರ, ಚಂದ್ರಶೇಖರ ಹಿರೇಮಠ, ಸುಧೀರ ಘಿವಾರಿ, ಸುಹಾಸ ಕುಲಕರ್ಣಿ, ಅಜಯ ಸುನಾಳಕರ ‘ಸೇವಾ ರತ್ನ’ ಪ್ರಶಸ್ತಿ ಪ್ರಕಟಿಸಲಾಗಿದೆ. ವಾರ್ಷಿಕೋತ್ಸವ ಅಂಗವಾಗಿ ಜುಲೈ 7ರಂದು ನಡೆಯುವ ‘ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಶಶಿಧರ ಘಿವಾರಿ ಹಾಗೂ ಕಾರ್ಯಾಧ್ಯಕ್ಷ ರುದ್ರಣ್ಣ ಚಂದರಗಿ ತಿಳಿಸಿದ್ದಾರೆ.