‘ಜಿಲ್ಲೆಯಲ್ಲಿ ಕಬ್ಬು ಬೆಳೆಯ ನಂತರ ಬೈಲಹೊಂಗಲ, ಬೆಳಗಾವಿ, ಖಾನಾಪುರ, ಕಿತ್ತೂರು ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಸೋಯಾಅವರೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬಾರಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾದವು. ಸೋಯಾಅವರೆ ಬೆಳೆಗೆ ಜಂಗಮ ರೋಗ (ಬೆಂಕಿ ರೋಗ) ತಗುಲಿ ಇಳುವರಿಯೂ ಕಡಿಮೆ ಬಂದಿದೆ. ಹಿಂದೆ ಎಕರೆಗೆ 10ಕ್ವಿಂಟಲ್ಗಿಂತ ಹೆಚ್ಚು ಇಳುವರಿ ಬರುತ್ತಿತ್ತು. ಈ ವರ್ಷ ಕೇವಲ 2 ಕ್ವಿಂಟಲ್ ಸಿಕ್ಕಿದೆ’ ಎಂದು ತಿಳಿಸಿದರು.