ಸುಳ್ಯ ತಾಲ್ಲೂಕು ಜಾಲ್ಸೂರು ಗ್ರಾಮ ಪಂಚಾಯಿತಿಯಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಅಧ್ಯಕ್ಷೆ ಶಶಿಕಲಾ ಎಸ್. ನಾಯಕ್, ಪಿಡಿಒ ಶೀನ ಎ. ವಿರುದ್ಧ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲ್ಲೂಕು ಆರ್ಯಾಪು ಗ್ರಾಮ ಪಂಚಾಯಿತಿಯ ಪ್ರಕರಣದಲ್ಲಿ ಅಧ್ಯಕ್ಷೆ ಗೀತಾ, ಪಿಡಿಒ, ಬಿಳಿನೆಲೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಅಧ್ಯಕ್ಷೆ ಶಾರದಾ ಟಿ., ಸದ್ಯಕ್ಕೆ ಕನಕಮಜಲು ಪಿಡಿಒ ಆಗಿರುವ ಸರೋಜಾ, ಸದ್ಯಕ್ಕೆ ಮಂಡೆಕೋಲು ಪಂಚಾಯಿತಿಯಲ್ಲಿರುವ ಕಾರ್ಯದರ್ಶಿ ರಮೇಶ ಪಿ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ.