‘ಅದಕ್ಕಾಗಿಯೇ ಏರ್ ಇಂಡಿಯಾ ಮಾರಬೇಡಿ ಎಂದು ಹೇಳಿದ್ದೆವು. ನಮ್ಮ ವಿಮಾನಗಳಿದ್ದಿದ್ದರೆ, ದಿನಕ್ಕೆ 15 ವಿಮಾನಗಳನ್ನು ಕಳುಹಿಸಿದ್ದಿದ್ದರೆ 3 ದಿನಗಳಲ್ಲಿ ಎಲ್ಲರನ್ನೂ ಕರೆದುಕೊಂಡು ಬರಬಹುದಿತ್ತು. ಈಗ ವಿಮಾನಗಳಿಲ್ಲ. ಬಾಡಿಗೆ ಪಡೆಯಬೇಕಾಗಿದೆ. ನಾನೂ ಸಚಿವನಾಗಿದ್ದೆ, ಯಾವುದೇ ದೇಶದಲ್ಲಿ ನಮ್ಮವರು ಸಿಲುಕಿದರೆ ಏರ್ ಇಂಡಿಯಾ ವಿಮಾನದಲ್ಲಿ ಉಚಿತವಾಗಿ ಕರೆದುಕೊಂಡು ಬರುತ್ತಿದ್ದೆವು. ಯಾರಾದರೂ ಸತ್ತರೆ ಮೃತದೇಹದೊಂದಿಗೆ ಇಬ್ಬರು ಉಚಿತವಾಗಿ ಬರಬಹುದಿತ್ತು. ಆದರೆ ಈಗ?’ ಎಂದು ಹೇಳಿದರು.