ಅಸ್ಸಾಂ ಶಿಕ್ಷಣ ಸಚಿವ ಸಿದ್ದಾರ್ಥ್ ಭಟ್ಟಚಾರ್ಯ, ‘2012–13ರಲ್ಲಿ ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯದವರ ಮೇಲೆ ದಾಳಿಗಳು ನಡೆದಾಗ, ಎಬಿವಿಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಸೋದರರಂತೆ ರಕ್ಷಣೆಗೆ ನಿಂತಿದ್ದರು. ಅದರ ಋಣಭಾರ ನಿಮ್ಮ ಮೇಲಿದೆ. ಹೀಗಾಗಿ, ಎಲ್ಲರೂ ಬಿಜೆಪಿಗೇ ಮತ ಚಲಾಯಿಸಿ. ಮತದಾನ ಹಕ್ಕು ಇಲ್ಲದಿರುವವರು, ತಮ್ಮ ಪರಿಚಿತರು ಕಮಲದ ಗುರುತಿಗೇ ಮತ ಹಾಕುವಂತೆ ಮಾಡುವ ಮೂಲಕ ನೈತಿಕ ಬೆಂಬಲ ಸೂಚಿಸಿ’ ಎಂದು ಮನವಿ ಮಾಡಿದರು.