ಬೆಳಗಾವಿ: ‘ಸರ್ಕಾರದ ತೀರ್ಮಾನದಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಕಚೇರಿ ಸ್ಥಳಾಂತರಿಸಲಾಗಿದ್ದು, ತಾತ್ಕಾಲಿಕವಾಗಿ ಇಲ್ಲಿನ ಗಣೇಶಪುರ ರಸ್ತೆಯಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಪ್ರಾರಂಭಿಸಲಾಗಿದೆ’ ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಅಕ್ರಂ ಪಾಷ ತಿಳಿಸಿದ್ದಾರೆ.
‘ಫೆ. 17ರಿಂದ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ಆರಂಭವಾಗುವುದರಿಂದ ಈ ಕಾರ್ಯಾಲಯವನ್ನು ಬೆಂಗಳೂರು ಹಾಗೂ ಬೆಳಗಾವಿ ಎರಡೂ ಕಡೆಯಲ್ಲೂ ನಿರ್ವಹಿಸಲಾಗುವುದು. ರಾಜ್ಯ ಹುಜೂರು ಖಜಾನೆಯಿಂದ ಸಕ್ಕರೆ ನಿರ್ದೇಶನಾಲಯಕ್ಕೆ ಪ್ರತ್ಯೇಕವಾಗಿ ಖಜಾನೆ ಕೋಡ್ ಮತ್ತು ಮಹಾಲೇಖಪಾಲರಿಂದ ಅಧಿಕೃತತೆ ಪಡೆಯಬೇಕಾಗುತ್ತದೆ. ಈ ಎಲ್ಲ ಅನುಮತಿಗಳನ್ನು ಪಡೆದು ಆರ್ಥಿಕ ವರ್ಷ ಆರಂಭವಾಗುವ ಏಪ್ರಿಲ್ನಿಂದ ಕಚೇರಿಯ ಕಾರ್ಯಕಲಾಪಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.