ಪ್ರಗತಿಪರ ಕೃಷಿಕ ರಾಮಲಿಂಗ ಹಲಕರ್ಣಿಕರ ಸಾವಯವ ಪದ್ಧತಿಯಲ್ಲಿ ಭತ್ತದ ಬೇಸಾಯ ಹಾಗೂ ಕೀಟ ನಿರ್ವಹಣೆ ಕುರಿತು ತಿಳಿಸಿದರು. ಜೀವಾಮೃತ, ಸಸ್ಯಾಧಾರಿತ ಕೀಟನಾಶಕಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ತಿಳಿಸಿಕೊಡಲಾಯಿತು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮಲ್ಲೇಶ ನಾಯ್ಕ ಮತ್ತು ರೈತ ಅನುವುಗಾರ ಸತಿಶ್ ಕದಮ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.