‘ಇದು ಬೆಳೆಗೆ ತೀವ್ರ ಹಾನಿ ಮಾಡುವ ಕೀಟವಾಗಿದೆ. ಚಿಕ್ಕ ಬೆಣೆಯಾಕಾರದ ಕಂದು ಬಣ್ಣದ ಪ್ರೌಢ ಮತ್ತು ಮರಿ ಕೀಟಗಳು ನೀರಿನ ಮಟ್ಟದ ಮೇಲ್ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಆವರಿಸಿ ರಸ ಹೀರುತ್ತವೆ. ಇದರಿಂದಾಗಿ ಪೈರು ಒಣಗಿ ಅಲ್ಲಲ್ಲಿ ಸುಟ್ಟು ಹೋದಂತೆ ಕಂಡುಬರುತ್ತದೆ. ಇದರ ಬಾಧೆಯಿಂದ ಶೇ 90ರವರೆಗೂ ಹಾನಿಯಾಗುವ ಸಂಭವವಿರುತ್ತದೆ. ಹೀಗಾಗಿ, ರೈತರು ನಿರ್ಲಕ್ಷ್ಯ ಮಾಡದೆ ತುರ್ತಾಗಿ ನಿಯಂತ್ರಣ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ನಾಯ್ಕರ್ ಸಲಹೆ ನೀಡಿದ್ದಾರೆ.