ಬೆಳಗಾವಿ:ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಹುಬ್ಬಳ್ಳಿ ಕೆಎಲ್ಇ ಕಾಲೇಜಿನ ಮೂರು ಜನ ವಿದ್ಯಾರ್ಥಿಗಳನ್ನು ಹಿಂಡಲಗಾ ಕಾರಾಗೃಹದಲ್ಲಿ ವಕೀಲರ ತಂಡ ಶುಕ್ರವಾರ ಭೇಟಿ ಮಾಡಿತು.
ಹಿರಿಯ ವಕೀಲ ಪ್ರಸನ್ನ ಆರ್, ಮೈತ್ರಾಯಿ ಕೃಷ್ಣನ್, ಅವಾಯಿ ಚೌಕ್ಸಿ ಭೇಟಿ ಮಾಡಿದರು.
ಸುಮಾರು 45 ನಿಮಿಷಗಳವರೆಗೆ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಅವರ ಪರ ವಕಾಲತ್ತು ನಡೆಸಲು ಒಪ್ಪಿಗೆ ಪತ್ರಕ್ಕೆ ಸಹಿ ಪಡೆದುಕೊಂಡರು.