ತೆಲಸಂಗ: ‘ಮನುಷ್ಯ ಬದುಕಿದ್ದರೆ ಹಣ ಸಂಪಾದಿಸಬಹುದು. ಪ್ರಾಣ ಹೋದರೆ ಮರಳಿ ಪಡೆಯಲಾಗುವುದಿಲ್ಲ. ಕೋವಿಡ್–19 ಕಾರಣದಿಂದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಆಗಿರುವುದರಿಂದಾಗಿ ಈ ಬಾರಿ ಶ್ರೀಮಠದಲ್ಲಿ ದಸರಾ ಉತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಇಲ್ಲಿನ ಹಿರೇಮಠದಲ್ಲಿ ದಸರಾ ಆಚರಣೆ ನಿಮಿತ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘9 ದಿನಗಳ ಪ್ರವಚನ, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಈ ಬಾರಿ ಇರುವುದಿಲ್ಲ. ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ’ ಎಂದರು.