ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಲೋಕೇಶ್ಕುಮಾರ್, ‘ರೋಟರಿ ಕ್ಲಬ್ಗಳು, ಗ್ರೀನ್ ಸೇವಿಯರ್, ಐಎಂಎ ಬೆಳಗಾವಿ, ಜಿತೋ, ವೇಣುಗ್ರಾಮ ಸೈಕ್ಲಿಂಗ್ ಕ್ಲಬ್, ಲೇಕ್ವ್ಯೂ ಪ್ರತಿಷ್ಠಾನ ಸೇರಿದಂತೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು (ಎನ್ಜಿಒ) ಸಂತ್ರಸ್ತರಿಗೆ ನೆರವಾಗಿವೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸವಾಲು ನಮ್ಮೆಲ್ಲರ ಮುಂದಿದೆ. ಇದಕ್ಕೂ ಎನ್ಜಿಗಳು ಸಹಹಾರ ನೀಡಬೇಕು’ ಎಂದು ತಿಳಿಸಿದರು.