ಅಮ್ಮಾಜೇಶ್ವರಿ ದೇವಸ್ಥಾನ ಆವರಣದ ಘಟಕ ಚಾಲನೆಯಲ್ಲಿದೆ. ಆದರೆ, ಅಲ್ಲಿಗೆ ಹೆಚ್ಚಿನ ಜನರು ಬರುತ್ತಾರೆ. ಸರದಿಯಲ್ಲಿ ನಿಂತು ಬೇಸತ್ತು ಹೋಗುತ್ತಿದ್ದಾರೆ. ಊರಿಂದ 2 ಕಿ.ಮೀ. ದೂರದಲ್ಲಿರುವ ಗುರುದೇವ ಆಶ್ರಮದ ಆವರಣದ ಘಟಕದಲ್ಲಿ ‘ನೀರಿನ ಕಾರ್ಡ್’ ಪಡೆದವರು ಮಾತ್ರ ನೀರು ಸಂಗ್ರಹಿಸಲು ಅವಕಾಶವಿದೆ. ಬೇರೆಯವರಿಗೆ ಇದರಿಂದ ಪ್ರಯೋಜನ ಆಗುತ್ತಿಲ್ಲ. ಕಾರ್ಡ್ ಇದ್ದವರು ನಾಲ್ಕು ಕಿ.ಮೀ. ನಡೆದುಕೊಂಡು ಹೋಗಿ ನೀರು ತರುವ ಅನಿವಾರ್ಯತೆ ಇದೆ. ಹೀಗಾಗಿ, ಗ್ರಾಮದ ಬಹುತೇಕರಿಗೆ ಹೊಳಿ ನೀರೆ ಗತಿಯಾಗಿದೆ.