ಉಗಾರ ಗ್ರಾಮ ಪಂಚಾಯ್ತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿದೆ. ಎರಡು ಅವಳಿ ಗ್ರಾಮಗಳಾಗಿದ್ದು, ಎರಡರ ನಡುವೆ ಕೇವಲ 1 ಕಿ.ಮೀ. ಅಂತರ ಇದೆ. ಪ್ರತಿ ವರ್ಷ ಮಳೆಗಾಲ ಬಂತೆಂದರೆ ಉಗಾರ ಮದ್ಯದ ತಗ್ಗು ಪ್ರದೇಶದಲ್ಲಿ ನೀರು ಆವರಿಸಿ ಸಾರಿಗೆ ಸಂಚಾರ ಕಡಿತಗೊಳ್ಳುತ್ತದೆ. ಇದನ್ನು ಮನಗಂಡ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ಅವರು ಸರ್ಕಾರದಿಂದ ₹ 3 ಕೋಟಿ ಅನುದಾನ ಮಂಜೂರು ಮಾಡಿಸಿ, ಉಗಾರ ಖುರ್ದ– ಉಗಾರ ಬುದ್ರುಕ ನಡುವೆ ಸೇತುವೆ ನಿರ್ಮಿಸಿದ್ದರು. ಆದರೆ, ತಗು ಪ್ರದೇಶದಲ್ಲಿರುವ ಎರಡೂ ಬದಿಯ ಅರ್ಧ ಕಿ.ಮೀ. ರಸ್ತೆಯನ್ನು ಎತ್ತರಿಸದೇ ಇರುವುದರಿಂದ ಪ್ರಯೋಜನವಾಗಿಲ್ಲ. ಜಲಾವೃತವಾಗುವುದು ತಪ್ಪಿಲ್ಲ. ಇದರಿಂದಾಗಿ ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.