ಅಥಣಿ: ಇಲ್ಲಿನ ಕೆಲವು ಯುವಕರು ತಮಗೆ ಕಲಿಸಿದ ಜೆ.ಎ. ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರಿಯಂವದಾ ಅಣ್ಣೆಪ್ಪನವರ ಹುಟ್ಟುಹಬ್ಬವನ್ನು ಕೊಪ್ಪದ ಗಲ್ಲಿಯ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ಮಂಗಳವಾರ ವಿಶೇಷವಾಗಿ ಆಚರಿಸಿದರು.
ಸಂತೋಷ ಬಡಕಂಬಿ, ರವಿ ಬಡಕಂಬಿ, ಶಶಿಧರ ಬರ್ಲಿ, ಅಭಯ ಸಗರಿ, ಅಕ್ಷಯ ಕಾರ್ವೇಕರ, ಅನಿಲ ಪೂಜಾರಿ ನೆಚ್ಚಿನ ಉಪನ್ಯಾಸಕಿಗೆ ವಿಶೇಷ ಉಡುಗೊರೆ ನೀಡಿದರು.
‘ನನ್ನ ಜೀವನದ ಅವಿಸ್ಮರಣೀಯವಾದ ದಿನವಿದು. ನನ್ನ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ತೋರಿ, ಜನರಿಗೆ ನೀರಿನ ವ್ಯವಸ್ಥೆ ಮಾಡಿರುವುದು ಖುಷಿ ತರಿಸಿದೆ. ಈ ಕ್ಷಣವನ್ನು ಮರೆಯುವುದಿಲ್ಲ’ ಎಂದರು.
‘ನಮ್ಮ ನೆಚ್ಚಿನ ಉಪನ್ಯಾಸಕಿಗೆ ವಿನೂತನ ಉಡುಗೂರೆ ನೀಡಬೇಕೆಂದು ಚರ್ಚಿಸುತ್ತಿದ್ದೆವು. ನೀರು ಪೂರೈಸುವ ವಿಚಾರ ಬಂತು. ಸ್ನೇಹಿತರೆಲ್ಲರೂ ಸೇರಿ ನೀರು ಪೂರೈಸಿದ್ದೇವೆ. ಇದರಿಂದ ಜನರಿಗೂ ಅನುಕೂಲವಾಯಿತು’ ಎಂದು ಸಂತೋಷ ಹೇಳಿದರು.