ಬೆಳಗಾವಿ: ಇಲ್ಲಿನ ಶಹಾಪುರ ಪ್ರದೇಶದ ನಾರ್ವೆಕರ್ ಗಲ್ಲಿಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಬುಕ್ಕಿ ಸಮೇತ ಮೂವರನ್ನು ಬಂಧಿಸಿರುವ ಶಹಾಪುರ ಠಾಣೆ ಪೊಲೀಸರು, ಅವರಿಂದ ₹ 23,360 ವಶಕ್ಕೆ ಪಡೆದಿದ್ದಾರೆ.
ಬುಕ್ಕಿ ಬಾಂದೂರ ಗಲ್ಲಿಯ ಪ್ರಮೋದ ಧಾಮಣೇಕರ, ಶಹಾಪುರದ ವಿಶ್ವನಾಥ ಮ್ಯಾಗಿನಮನಿ ಮತ್ತು ಕೃಷ್ಣ ಉಪರಿ ಬಂಧಿತರು.
ಮಾರ್ಕೆಟ್ ಎಸಿಪಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಘವೇಂದ್ರ ಹವಲ್ದಾರ ಮತ್ತು ಸಿಬ್ಬಂದಿ ಯು.ಟಿ. ಪಾಟೀಲ, ಎಸ್.ಆರ್. ದೊಡ್ಡನಾಯ್ಕರ. ಎ.ವಿ. ನೀಲಪ್ಪನವರ, ಎನ್.ಸಿ. ತುರಮಂದಿ, ಎಂ.ಎಂ. ನದಾಫ್, ಎಸ್.ಎಂ. ಕಾಂಬಳೆ, ಹನಮಂತ ವಿಭೂತಿ, ಎ.ಪಿ. ಖೋತ, ವಿ.ಎಲ್. ಬುಶಿ ದಾಳಿ ನಡೆಸಿದ್ದಾರೆ.