‘ಕನ್ನಡಹೊರತಾಗಿಬೇರೆಮಾಧ್ಯಮವಿದ್ದರೆ, ಅಲ್ಲಿ ಕನ್ನಡಭಾಷಾ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕೆನ್ನುವ ನಿಯಮವಿದೆ. ಆ ಪ್ರಕಾರ ಮೂರು ಶಾಲೆಗಳಿಗೆ ತಲಾ ಒಬ್ಬರು ಕನ್ನಡ ಭಾಷಾ ಶಿಕ್ಷಕರನ್ನು ನಿಯೋಜಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕುಸಿದಿರುವುದರಿಂದ ಮೂರು ಶಾಲೆಗಳಲ್ಲಿ ತಲಾ ಒಬ್ಬರು ಮರಾಠಿ ಶಿಕ್ಷಕರನ್ನು ಉಳಿಸಿಕೊಂಡು, ಉಳಿದಿಬ್ಬರನ್ನು ಕೂಡಲೇ ಬೇರೆ ಶಾಲೆಗೆ ನಿಯೋಜಿಸುತ್ತೇವೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.