ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆರೋಗ್ಯಾಧಿಕಾರಿ, ‘ಸದಾಶಿವನಗರ ಸ್ಮಶಾನದಲ್ಲಿ ಒಂದೇ ದಿನ 14 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿರುವುದು ನಿಜ. ಆದರೆ, ಇವರಲ್ಲಿ ಇಬ್ಬರಷ್ಟೆ ಕೋವಿಡ್ನಿಂದ ಸಾವಿಗೀಡಾದವರು. ವಯೋಸಹಜವಾಗಿ, ಇತರ ಆರೋಗ್ಯ ತೊಂದರೆಯಿಂದ ನಿಧನರಾದವರೂ ಇದರಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಿಧನರಾದ ಕೋವಿಡ್ ಶಂಕಿತರು ಕೂಡ ಇದ್ದಾರೆ. ಕೋವಿಡ್ ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಇಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಇವರಲ್ಲಿ ಜಿಲ್ಲೆಯ ವಿವಿಧೆಡೆಯ ಹಾಗೂ ನೆರೆಯ ಮಹಾರಾಷ್ಟ್ರದವರೂ ಇದ್ದಾರೆ’ ಎಂದು ತಿಳಿಸಿದರು.