ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ, ‘ಗ್ರಾಮದ ಆಯ್ದ ರೈತರ ಜಮೀನುಗಳಲ್ಲಿ ನಿರ್ವಹಣೆ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ. ರೈತರು ಅಲ್ಲಿ ಅಳವಡಿಸಿದ ತಂತ್ರಜ್ಞಾನಗಳ ಮಾಹಿತಿ ಪಡೆದು ಅಧಿಕ ಇಳುವರಿ ತೆಗೆಯಲು ಪ್ರಯತ್ನಿಸಬೇಕು. ಸಮಗ್ರ ಪೋಷಕಾಂಶ ನಿರ್ವಹಣೆಗೆ ನೀರಾವರಿಯಲ್ಲಿ ಎಕರೆಗೆ 4 ಟನ್ ಮತ್ತು ಮಳೆಯಾಶ್ರಿತದಲ್ಲಿ 3 ಟನ್ ಕೊಟ್ಟಿಗೆ ಗೊಬ್ಬರ ಬಳಸಬೇಕು’ ಎಂದು ಸಲಹೆ ನೀಡಿದರು.