ಪ್ರತಿ ವರ್ಷ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿಯವರು ವಿವಿಧೆಡೆ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡುತ್ತಾರೆ. ಮುಂದೆ ಅವುಗಳಿಗೆ ನೀರುಣಿಸಲು ಪಂಚಾಯ್ತಿಯವರೊಂದಿಗೆ ಸಿದ್ದಣ್ಣ ಟೊಂಕಕಟ್ಟಿ ನಿಲ್ಲುತ್ತಾರೆ. ಪಂಚಾಯ್ತಿಯ ಟ್ಯಾಂಕರನ್ನು ಹಳ್ಳ, ಬಾವಿ, ಕೊಳವೆಬಾವಿಗೆ ಒಯ್ದು ನೀರು ತುಂಬಿಸಿಕೊಂಡು ಊರಲ್ಲಿಯ ಗಿಡಗಳಿಗೆ ಸರದಿಯಂತೆ ನೀರು ಹಾಕುತ್ತಾರೆ. ಅವರ ಸೇವೆಯನ್ನು ಕಂಡು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಕೂಡ ನೀರು ಹಾಕಲು ಕೈಜೋಡಿಸುತ್ತಾರೆ. ಚಿಕ್ಕು, ಮಾವು, ಸೀತಾಫಲ, ರಾಮಫಲ ಹಣ್ಣಿನ ಗಿಡಗಳು ಕೂಡ ಇದ್ದು, ಅವು ಫಲ ನೀಡುತ್ತಿವೆ.