‘ತಾಲ್ಲೂಕಿನ ಕಡೋಲಿಯ ಸುನೀಲ್ ಬಗರೆ, ವಿವೇಕ ಬಿರ್ಜೆ ಹಾಗೂ ರಿತೇಶ್ ಪರುಶುರಾಮ ಕಣಬರಗಿಯಿಂದ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಎಪಿಎಂಸಿಯಲ್ಲಿ ಈರುಳ್ಳಿ ಇಳಿಸಿ, ಕೊಲ್ಹಾಪುರದ ಕಡೆಗೆ ಹೋಗುತ್ತಿದ್ದ ಲಾರಿಯು ದ್ವಿಚಕ್ರವಾಹನಕ್ಕೆ ತಾಕಿದೆ. ಆಗ, ಮೂವರೂ ಎಡಕ್ಕೆ ಬಿದ್ದಿದ್ದಾರೆ; ಬೈಕ್ ಲಾರಿ ಕೆಳಗಡೆಗೆ ಹೋಗಿದೆ. ನಂತರ ಬೈಕ್ನ ಟ್ಯಾಂಕ್ನಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅದು ಲಾರಿಗೂ ವ್ಯಾಪಿಸಿದೆ ಎಂದು ಗೊತ್ತಾಗಿದೆ’ ಪೊಲೀಸರು ಮಾಹಿತಿ ನೀಡಿದರು.