ಎಸಿಪಿ (ಅಪರಾಧ) ಮಹಾಂತೇಶ್ವರ ಜಿದ್ದಿ, ಸಿಬ್ಬಂದಿಗಳಾದ ಐ.ಎಸ್. ಪಾಟೀಲ, ಎ.ಎಲ್. ಪಾಟೀಲ, ಎಸ್.ಬಿ ಪಾಟೀಲ, ಸುನೀಲ ಬಾಗಲಕೋಟ ಮತ್ತು ಜಿ.ಎಸ್ ನಾಡಗೌಡ ಅವರೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ₹ 15,425 ನಗದು ವಶಪಡಿಸಿಕೊಂಡಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.