ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗುತ್ತಿರುವ ಮಗು ಕಾಪಾಡಲು ಹೋದ ವ್ಯಕ್ತಿಯೂ ಸಾವು 

Last Updated 8 ನವೆಂಬರ್ 2019, 15:24 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ವ್ಯಕ್ತಿಯೂ ಸೇರಿದಂತೆ ಶುಕ್ರವಾರ ಇಬ್ಬರು ಸಾವಿಗೀಡಾದರು.

ಈಜು ಕಲಿಯಲು ಹೊಲದ ಮಾಲೀಕರ ಮಗ ಅಭಿಷೇಕ ಅವಟಿ (9) ಹದಿನೈದು ಅಡಿಗಿಂತಲೂ ಹೆಚ್ಚು ಆಳವಿದ್ದ ಹೊಂಡದಲ್ಲಿ ಇಳಿದಿದ್ದ. ಅದೇ ಹೊಲದಲ್ಲಿ ಕಾರ್ಮಿಕನಾಗಿದ್ದ ಬೀರಪ್ಪ ಕಡೋಲ್ಕರ್‌ (42), ಮುಳುಗುತ್ತಿದ್ದ ಅಭಿಷೇಕನನ್ನು ಮೇಲಕ್ಕೆತ್ತಲು ಹೊಂಡಕ್ಕೆ ಇಳಿದಿದ್ದರು. ಆಯತಪ್ಪಿದ ಇಬ್ಬರೂ ಹೊಂಡದಲ್ಲಿ ಮುಳುಗಿ ಸಾವಿಗೀಡಾದರು.

ಐಗಳಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT