‘ಎರಡೂ ಗಂಡು ಹುಲಿಗಳನ್ನು ವಾಹನದಲ್ಲಿ ಸುರಕ್ಷಿತವಾಗಿ ಇಲ್ಲಿಗೆ ತರಲಾಗಿದೆ. ಅವು ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದವಾಗಿವೆ. ಮೈಸೂರು ಮೃಗಾಲಯದಲ್ಲಿ ಅವು ಇದ್ದವು. ಕೆಲವು ದಿನಗಳವರೆಗೆ ಕ್ವಾರಂಟೈನ್ನಲ್ಲಿ ಅವುಗಳನ್ನು ಇರಿಸಲಾಗುವುದು. ಹೊಸ ಸ್ಥಳಕ್ಕೆ ಹೊಂದಿಕೊಂಡ ಬಳಿಕ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. 8–10 ದಿನಗಳಲ್ಲಿ ಚಿರತೆಗಳನ್ನು ಕೂಡ ತರಿಸಲಾಗುವುದು’ ಎಂದು ಬೆಳಗಾವಿ ವಲಯದ ಸಿಸಿಎಫ್ ಬಸವರಾಜ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.