ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಕನ್ಹಯ್ಯ ಲಾಲ್ ಹತ್ಯೆ ಮಾನವತೆಗೆ ಮಾಡಿದ ದೊಡ್ಡ ಅಪಮಾನ. ಅಂಗಡಿಗೆ ನುಗ್ಗಿ ಟೈಲರ್ ಹತ್ಯೆಗೈದಿರುವುದು ಖಂಡನೀಯ. ಇದೇ ರೀತಿ ಪ್ರಧಾನಿ ಹತ್ಯೆಗೈಯುವುದಾಗಿಯೂ ಹಂತಕ ಹೇಳಿದ್ದಾನೆ. ಒಬ್ಬ ಮನುಷ್ಯನನ್ನು ಹತ್ಯೆಗೈಯುವಂತೆ ಯಾವ ಧರ್ಮವೂ ಹೇಳಿಲ್ಲ. ಈ ಹಂತಕ ಹಿಂದೂನೂ ಅಲ್ಲ, ಮುಸ್ಲಿಮನೂ ಅಲ್ಲ. ಆತನೊಬ್ಬ ಜಿಹಾದಿ. ಆತನಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.