ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಕೋವಿಡ್ 19 ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದ ವಿವಿಧ ಕೆರೆಗಳಲ್ಲಿ ಎಷ್ಟು ಮೀನು ಬಿಟ್ಟಿದ್ದೀರಿ, ಎಲ್ಲೆಲ್ಲಿ ಎಂದು ಕೇಳಿದಾಗ, ಅಧಿಕಾರಿ ಕುಲಕರ್ಣಿ ಸಮರ್ಪಕ ಮಾಹಿತಿ ನೀಡಲಿಲ್ಲ. ಸಿಟ್ಟಿಗೆದ್ದ ಶಾಸಕರು, ಮೀನುಗಾರಿಕೆ ಮೇಲಧಿಕಾರಿ ಸೇರಿ ಮೀನುಗಾರಿಕೆ ಇಲಾಖೆ ಸಭೆ ಕರೆಯಲು ತಹಶೀಲ್ದಾರ್ ಅಶೋಕ ಗುರಾಣಿಗೆ ಸೂಚಿಸಿದರು.